ADVERTISEMENT

ಕೇರಳ ಸಿಎಂ ಪುತ್ರಿ ವಿವಾಹದಲ್ಲಿ ಪಾಲ್ಗೊಂಡ ಕೊಲೆ ಪ್ರಕರಣ ಅಪರಾಧಿ; ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 16:53 IST
Last Updated 15 ಜೂನ್ 2020, 16:53 IST
ಕೇರಳ ಸಿಎಂ ಪಿನರಾಯಿ ವಿಜಯನ್‌ ಪುತ್ರಿಯ ವಿವಾಹ ಸಂದರ್ಭ
ಕೇರಳ ಸಿಎಂ ಪಿನರಾಯಿ ವಿಜಯನ್‌ ಪುತ್ರಿಯ ವಿವಾಹ ಸಂದರ್ಭ   

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿಯ ಮದುವೆ ಸಮಾರಂಭದಲ್ಲಿ ಕೊಲೆ ಪ್ರಕರಣದ ಅಪರಾಧಿ ಪಾಲ್ಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ವಿಜಯನ್ ಪುತ್ರಿ ವೀಣಾ ಹಾಗೂ ಡಿವೈಎಫ್‌ಐ ರಾಷ್ಟ್ರೀಯ ಘಟಕ ಅಧ್ಯಕ್ಷ ಮುಹಮ್ಮದ್‌ ರಿಯಾಸ್‌ ಅವರ ವಿವಾಹವು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕ್ಲಿಫ್ ಹೌಸ್‌ನಲ್ಲಿ ಸೋಮವಾರ ಸರಳವಾಗಿ ನಡೆಯಿತು.

ಮದುವೆ ನಡೆದ ಕೆಲವೇ ಹೊತ್ತಿನಲ್ಲಿ ಬಿಜೆಪಿ ವಕ್ತಾರ ಸಂದೀಪ್‌ ಜಿ. ವಾರ‍್ಯರ್, ಮದುವೆಯ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ‘ತ್ರಿಶ್ಯೂರ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರ ಕೊಲೆ ಪ್ರಕರಣದ ಅಪರಾಧಿ ಮುಹಮ್ಮದ್‌ ಹಾಶಿಂ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಮುಹಮ್ಮದ್‌ ಹಾಶಿಂ, ರಿಯಾಸ್‌ ಅವರ ಸಂಬಂಧಿ ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.