ADVERTISEMENT

ಶಬರಿಮಲೆ ಯಾತ್ರೆ: ಅರಣ್ಯ ಮಾರ್ಗ ಬಳಕೆ ಹೆಚ್ಚಳ

ಪಿಟಿಐ
Published 14 ಡಿಸೆಂಬರ್ 2025, 13:44 IST
Last Updated 14 ಡಿಸೆಂಬರ್ 2025, 13:44 IST
ಶಬರಿಮಲೆ ಅಯ್ಯಪ್ಪ ದೇಗುಲ
ಶಬರಿಮಲೆ ಅಯ್ಯಪ್ಪ ದೇಗುಲ   

ಪತ್ತನಂತಿಟ್ಟ (ಕೇರಳ): ‘ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ(ಟಿಡಿಬಿ) ಅಧಿಕಾರಿಗಳು ಭಾನುವಾರ ತಿಳಿಸಿದರು.

‘ಪ್ರಸ್ತುತ ಯಾತ್ರೆಯ ಅವಧಿಯಲ್ಲಿ ಈವರೆಗೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ವಿವಿಧ ಅರಣ್ಯ ಮಾರ್ಗಗಳ ಮೂಲಕ ಸನ್ನಿಧಾನಕ್ಕೆ ಬಂದಿದ್ದಾರೆ’ ಎಂದು ಅವರು ಹೇಳಿದರು.

‘ಅಳುತಕಡವು–ಪಂಪಾ ಮಾರ್ಗದಿಂದ ಪ್ರತಿದಿನ 1,500 ರಿಂದ 2000ರವರೆಗೆ ಒಟ್ಟು 37,059 ಭಕ್ತರು ಹಾಗೂ ಸತ್ರಂ ಮಾರ್ಗದಿಂದ ನಿತ್ಯ 4000ದಿಂದ 5000ದವರೆಗೆ ಒಟ್ಟು 64,776 ಮಂದಿ ಭಕ್ತರು ಬಂದಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು. 

ADVERTISEMENT

‘ಮುಂದಿನ ದಿನಗಳಲ್ಲಿ ಅರಣ್ಯ ಮಾರ್ಗದಿಂದ ಸನ್ನಿಧಾನಕ್ಕೆ ಬರುವ ಭಕ್ತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.