ADVERTISEMENT

ಅಧಿಕಾರಕ್ಕೆ ಬರಲು ಬಿಜೆಪಿ ನನ್ನನ್ನು ಬಳಸಿಕೊಂಡಿದ್ದು ನಿಜ: ಅಣ್ಣಾ ಹಜಾರೆ

ಪಿಟಿಐ
Published 4 ಫೆಬ್ರುವರಿ 2019, 18:38 IST
Last Updated 4 ಫೆಬ್ರುವರಿ 2019, 18:38 IST

ಮುಂಬೈ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಜೀವ ಉಳಿಸುವಂತೆ ಶಿವಸೇನಾ ಸೋಮವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

‘ಮೊಂಡುತನ ಮತ್ತು ಹಟಮಾರಿ ಧೋರಣೆಗೆ ಅಣ್ಣಾ ಹಜಾರೆ ಅವರನ್ನು ಟೀಕಿಸಲಾಗುತ್ತದೆ. ಇದೇ ಗುಣಲಕ್ಷಣಗಳನ್ನು ಮೋದಿಯವರಲ್ಲೂ ಕಾಣಬಹುದು. ಆದರೆ ಅವರನ್ನು ಶ್ರೇಷ್ಠ ವ್ಯಕ್ತಿ ಎಂಬಂತೆ ಬಿಂಬಿಸಲಾಗುತ್ತದೆ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಹೇಳಿದೆ.

‘ಮೊದಲು ಅಣ್ಣಾ ಹಜಾರೆ ಅವರ ಪ್ರಾಣ ಉಳಿಸಿ. ನಂತರ, ಏನು ಮಾಡಬಹುದು ಎಂಬುದನ್ನು ಚಿಂತಿಸೋಣ’ ಎಂದು ಹೇಳಿದೆ.

ADVERTISEMENT

‘ಈ ಕದನದಲ್ಲಿ ಅಣ್ಣಾ ಹಜಾರೆ ಅವರು ಪ್ರಾಣ ಕಳೆದುಕೊಳ್ಳಲಿ ಎಂಬುದೇ ಕೇಂದ್ರ ಸರ್ಕಾರದ ಬಯಕೆಯಾಗಿದ್ದರೆ, ಇದು ರಾಜ್ಯದ ಸಂಸ್ಕೃತಿ ರೋಗಗ್ರಸ್ಥವಾಗುತ್ತಿರುವ ಸಂಕೇತವನ್ನು ಪ್ರದರ್ಶಿಸುತ್ತದೆ’ಎಂದು ಟೀಕಿಸಿದೆ.

ಕೇಂದ್ರದಲ್ಲಿ ಲೋಕಪಾಲ್‌ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಸ್ಥಾಪಿಸಬೇಕು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಸ್ವಗ್ರಾಮದಲ್ಲಿ ಅಣ್ಣಾ ಹಜಾರೆ ಜ.30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಆರನೇ ದಿನಕ್ಕೆ ಕಾಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.