ADVERTISEMENT

ಗೌರಿಕುಂಡ ಬಳಿ ಭೂಕುಸಿತ: ನಾಲ್ವರ ಶವ ಪತ್ತೆ

ಪಿಟಿಐ
Published 5 ಆಗಸ್ಟ್ 2023, 16:22 IST
Last Updated 5 ಆಗಸ್ಟ್ 2023, 16:22 IST

ರುದ್ರಪ್ರಯಾಗ (ಉತ್ತರಾಖಂಡ): ಗೌರಿಕುಂಡದ ಸಮೀಪ ಪ್ರವಾಹದಿಂದ ಉಂಟಾದ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ 20 ಮಂದಿ ಪೈಕಿ ನಾಲ್ವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಉಳಿದವರ ಪತ್ತೆಗಾಗಿ ಶನಿವಾರ ಶೋಧ ಕಾರ್ಯಾಚರಣೆ ಮುಂದುವರಿಯಿತು.

‘ಸ್ಥಳೀಯ ಆಡಳಿತದೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಸುಮಾರು 100 ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಜಂಟಿಯಾಗಿ ಶೋಧ ಕಾರ್ಯ ಕೈಗೊಂಡಿವೆ. ಇದರ ಜತೆಗೆ ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ’ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್ ಸಿಂಗ್ ರಾಜ್ವರ್ ಮಾಹಿತಿ ನೀಡಿದ್ದಾರೆ. 

ಗೌರಿಕುಂಡದ ಸಮೀಪ, ಕೇದಾರನಾಥ ಮಾರ್ಗದಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಭಾರಿ ಮಳೆಯಿಂದ ಪ್ರವಾಹವುಂಟಾಗಿ ಭೂಕುಸಿತ ಉಂಟಾಗಿತ್ತು. ಈ ವೇಳೆ ಮೂರು ಅಂಗಡಿಗಳು ಕೊಚ್ಚಿ ಹೋಗಿದ್ದವು. 20 ಜನರು ನಾಪತ್ತೆಯಾಗಿದ್ದರು. 

ADVERTISEMENT

ಅಂಗಡಿಗಳಿದ್ದ ಸ್ಥಳದಿಂದ ಸುಮಾರು 50 ಮೀಟರ್ ಕೆಳಗೆ ಮಂದಾಕಿನಿ ನದಿಯು ಹರಿಯುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.