ADVERTISEMENT

ನಾವು ಎಲ್ಲರನ್ನೂ ಚಂದ್ರನಲ್ಲಿಗೆ ಕಳಿಸಬೇಕಾ; ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿ

ಪಿಟಿಐ
Published 12 ಡಿಸೆಂಬರ್ 2025, 10:04 IST
Last Updated 12 ಡಿಸೆಂಬರ್ 2025, 10:04 IST
   

ನವದೆಹಲಿ: ನಾವು ಈಗ ಎಲ್ಲರನ್ನೂ ವಾಸ ಮಾಡಲು ಚಂದ್ರನಲ್ಲಿಗೆ ಕಳಿಸಬೇಕಾ ಎಂದು ಶುಕ್ರವಾರ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ.

ದೆಹಲಿ ಮಾತ್ರವಲ್ಲದೇ, ದೇಶದ ಶೇ 75ಕ್ಕಿಂತ ಅಧಿಕ ಜನರು ಹೆಚ್ಚಿನ ಭೂಕಂಪನ ವಲಯದಲ್ಲಿದ್ದಾರೆ. ಅವರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

ಜಪಾನ್‌ನಲ್ಲಿ ಇತ್ತೀಚೆಗೆ ಜರುಗಿದ ಭೂಕಂಪದ ಉದಾಹರಣೆ ನೀಡಿ, ಭೂಕಂಪನದ ವೇಳೆಯಲ್ಲಿ ಹಾನಿಯನ್ನು ಕಡಿಮೆಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ಅರ್ಜಿದಾರ ಮನವಿ ಮಾಡಿದರು.

ADVERTISEMENT

ಅರ್ಜಿ ವಿಚಾರಣೆ ಮಾಡಿದ ನ್ಯಾ. ವಿಕ್ರಮ್‌ ನಾಥ್‌ ಹಾಗೂ ನ್ಯಾ. ಸಂದೀಪ್‌ ಮೇಹ್ತಾ ಅವರ ಪೀಠವು ‘ಇದು ಸರ್ಕಾರದ ಕೆಲಸ, ನ್ಯಾಯಾಲಯದ ವ್ಯಾಪ್ತಿಯಲ್ಲಿ ಇದು ಬರುವುದಿಲ್ಲ’ ಎಂದು ಅರ್ಜಿಯನ್ನು ತಿರಸ್ಕರಿಸಿತು.

ಅರ್ಜಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಅರ್ಜಿದಾರ ನ್ಯಾಯಾಲಯಕ್ಕೆ ಸಾಬೀತುಪಡಿಸಿದರು.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠವು ಇವು ಮಾಧ್ಯಮಗಳ ವರದಿಯಾಗಿದ್ದು, ಇವುಗಳ ಕುರಿತು ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಉತ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.