ADVERTISEMENT

ನೂತನ ಕೃಷಿ ಕಾಯ್ದೆಗಳ ನಿರ್ಮಾತೃ ಅಮರಿಂದರ್ ಸಿಂಗ್: ಸಿಧು ಟೀಕೆ

ಪಿಟಿಐ
Published 21 ಅಕ್ಟೋಬರ್ 2021, 15:00 IST
Last Updated 21 ಅಕ್ಟೋಬರ್ 2021, 15:00 IST
ನವಜೋತ್‌ ಸಿಂಗ್‌ ಸಿಧು
ನವಜೋತ್‌ ಸಿಂಗ್‌ ಸಿಧು   

ಚಂಡೀಗಡ: ‘ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರೇ ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳ ನಿರ್ಮಾತೃ’ ಎಂದು ಕಾಂಗ್ರೆಸ್‌ನ ಪಂಜಾಬ್‌ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಗುರುವಾರ ಟೀಕಿಸಿದರು.

‘ಮೂರು ಕರಾಳ ಕಾಯ್ದೆಗಳನ್ನು ರೂಪಿಸಿರುವ ಅಮರಿಂದರ್‌ ಸಿಂಗ್‌ ಪಂಜಾಬ್‌ಗೆ ಅಂಬಾನಿಯನ್ನು ಕರೆತಂದರು. ಒಂದಿಬ್ಬರು ಕಾರ್ಪೋರೇಟ್‌ಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ರಾಜ್ಯದ ರೈತರು, ಸಣ್ಣ ವರ್ತಕರು ಹಾಗೂ ಕೃಷಿಕೂಲಿ ಕಾರ್ಮಿಕರನ್ನು ನಾಶ ಮಾಡಿದರು’ ಎಂದು ಸಿಧು ಟೀಕಿಸಿದ್ದಾರೆ.

ಅಮರಿಂದರ್ ಸಿಂಗ್‌ ಅವರು ನೂತನ ಪಕ್ಷ ಸ್ಥಾಪಿಸುವುದಾಗಿ ಇತ್ತೀಚೆಗೆ ಹೇಳಿದ್ದಾರೆ. ಅಲ್ಲದೇ, ರೈತರ ಹಿತಾಸಕ್ತಿ ಕಾಪಾಡುವ ರೀತಿಯಲ್ಲಿ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಅಂತ್ಯಗಾಣಿಸಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಥಾನಗಳ ಹೊಂದಾಣಿಕೆ ಮಾಡಿಕೊಳ್ಳುವ ಸುಳಿವನ್ನೂ ಅವರು ನೀಡಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಸಿಧು ಈ ಟೀಕಾಪ್ರಹಾರ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.