ADVERTISEMENT

ಶಿವಗಿರಿ ಮಠದ ಮಾಜಿ ಮುಖ್ಯಸ್ಥ ಸ್ವಾಮಿ ಪ್ರಕಾಶಾನಂದ ಇನ್ನಿಲ್ಲ

ಪಿಟಿಐ
Published 7 ಜುಲೈ 2021, 11:04 IST
Last Updated 7 ಜುಲೈ 2021, 11:04 IST

ವರ್ಕಲಾ: ಶಿವಗಿರಿ ಮಠದ ಮಾಜಿ ಮುಖ್ಯಸ್ಥರಾಗಿದ್ದ ಸ್ವಾಮಿ ಪ್ರಕಾಶಾನಂದ (99) ಅವರು ವಯೋಸಹಜ ಕಾಯಿಲೆಗಳಿಂದ ನಿಧನ ಹೊಂದಿದ್ದಾರೆ ಎಂದು ಮಠದ ಮೂಲಗಳು ಬುಧವಾರ ತಿಳಿಸಿವೆ.

ಆಧ್ಯಾತ್ಮಿಕ ವಿದ್ವಾಂಸರಾಗಿದ್ದ ಅವರು ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಶ್ರೀ ನಾರಾಯಣ ಧರ್ಮ ಸಂಘಂ ಟ್ರಸ್ಟ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಧ್ಯಾತ್ಮಿಕ ಕೇಂದ್ರವಾಗಿರುವ ಶಿವಗಿರಿ ಮಠವನ್ನು ಹೆಸರಾಂತ ಸಾಮಾಜಿಕ ಸುಧಾರಕ ಶ್ರೀನಾರಾಯಣ ಗುರು ಅವರು ಸ್ಥಾಪಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.