ADVERTISEMENT

₹ 22 ಲಕ್ಷ ವಂಚನೆ: ಆರು ಅಂಚೆ ನೌಕರರ ವಿರುದ್ಧ ಪ್ರಕರಣ ದಾಖಲು

ಪಿಟಿಐ
Published 25 ಮಾರ್ಚ್ 2023, 13:17 IST
Last Updated 25 ಮಾರ್ಚ್ 2023, 13:17 IST
.
.   

ಪುಣೆ: ಸಾವಧಿ ಠೇವಣಿ (ಟಿ.ಡಿ) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ₹ 22 ಲಕ್ಷ ಹಣ ವಂಚಿಸಿರುವ ಆರೋಪದಲ್ಲಿ ಮಹಾರಾಷ್ಟ್ರದ ಪುಣೆ ಅಂಚೆ ಕಚೇರಿಯ ಆರು ಮಂದಿ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಗರದ ಡಂಕ್ರಿಕ್‌ ಲೈನ್ಸ್‌ ಉಪ ಅಂಚೆ ಕಚೇರಿ, ಡಿಘಿ ಕ್ಯಾಂಪ್‌ ಉಪ ಅಂಚೆ ಕಚೇರಿ ಮತ್ತು ವಿಮನ್‌ ನಗರ ಕಾರ್ಮಿಕರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಜುಲೈ 2018 ಮತ್ತು ಆಗಸ್ಟ್‌ 2020ರ ನಡುವೆ ಡಿಘಿ ಕ್ಯಾಂಪ್‌ ಉಪ ಅಂಚೆ ಕಚೇರಿಯಲ್ಲಿ ಈ ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT