ಡೆಹ್ರಾಡೂನ್: ಕೇದಾರನಾಥ ದುರಂತದಲ್ಲಿ ಮೃತಪಟ್ಟಿದ್ದ ನಾಲ್ವರ ಅಸ್ಥಿಪಂಜರದ ಅವಶೇಷಗಳು, ಅವಘಡ ಸಂಭವಿಸಿದ ಏಳು ವರ್ಷಗಳ ತರುವಾಯ ಹಿಮಾಲಯದ ರಾಂಬರ ಪ್ರದೇಶದಲ್ಲಿ ಪತ್ತೆಯಾಗಿದೆ.
ಪೊಲೀಸ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿ ಭಾನುವಾರ ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ವೇಳೆ ಅವಶೇಷಗಳು ಪತ್ತೆಯಾಗಿದೆ. ಉತ್ತರಾಖಂಡ ಹೈಕೋರ್ಟ್ ಆದೇಶದ ಮೇರೆಗೆ ಶೋಧ ಕಾರ್ಯಾಚರಣೆ ನಡೆಯಿತುಎಂದು ರುದ್ರಪ್ರಯಾಗ್ನ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಸಿಂಗ್ ಬುಲ್ಲಾರ್ ಅವರು ತಿಳಿಸಿದರು.
ಅಸ್ಥಿಪಂಜರದ ಡಿಎನ್ಎ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ಕೇದಾರನಾಥ ದುರಂತದ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿಗಳ ಕುಟುಂಬದ ಸದಸ್ಯರ ಡಿಎನ್ಎಗಳೊಂದಿಗೆ ಈಗ ಪಡೆದಿರುವ ಅಸ್ಥಿಪಂಜರದ ಡಿಎನ್ಎಗಳನ್ನು ಹೋಲಿಸಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.
ದುರಂತದಲ್ಲಿ ಮೃತಪಟ್ಟವರಲ್ಲಿ ಸುಮಾರು 703 ಜನರ ಅಸ್ಥಿಪಂಜರದ ಅವಶೇಷಗಳುಇದುವರೆಗೂ ಪತ್ತೆಯಾಗಿವೆ. ಕೇದಾರನಾಥದಲ್ಲಿ 2013ರ ಜೂನ್ 14 ರಿಂದ ಜೂನ್ 17ರವರೆಗೆಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿತ್ತು. ರಸ್ತೆ, ಕಟ್ಟಡಗಳು ಹಾನಿಗೊಂಡಿದ್ದವು. ಸುಮಾರು 10 ಸಾವಿರ ಜನ ಮೃತಪಟ್ಟಿದ್ದರು.3,183 ಮಂದಿ ಇನ್ನೂ ಕಾಣೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.