ಪಣಜಿ: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು ಸುದ್ದಿಯಿಂದ ರಾಜಕಾರಣಿಗಳು ರಾತ್ರಿ ನಿದ್ರೆಗೆಡುವಂತಾಗುತ್ತದೆ; ಹಾಗಾಗಿ ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಿದರೆ,ರಾಜಕಾರಣಿಗಳು ಒಳ್ಳೆಯ ನಿದ್ರೆ ಮಾಡಬಹುದು ಎಂದು ಗೋವಾ ಇಂಧನ ಸಚಿವ ನೀಲೇಶ್ ಕಬ್ರಲ್ ಹೇಳಿದ್ದಾರೆ.
ಗೋವಾದಲ್ಲಿ ಶಾಸಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಲಿ ಹಾಗೂ ಮಾಜಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜಾಲತಾಣಗಳು ಒತ್ತಡ ಸೃಷ್ಟಿಸುತ್ತಿವೆ.ಕೆಲವೊಮ್ಮೆ ರಾಜಕಾರಣಿಗಳು ನೀಡದೇ ಇರುವ ಹೇಳಿಕೆಗಳನ್ನು, ಅವರೇ ನೀಡಿದ್ದಾರೆ ಎನ್ನುವ ರೀತಿ ಬಿಂಬಿಸಲಾಗುತ್ತದೆ. ಜನರು ಇದನ್ನೇ ವಾಸ್ತವ ಎಂದು ನಂಬಲಾರಂಭಿಸುತ್ತಾರೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.