ADVERTISEMENT

ಕೃಷಿ ತ್ಯಾಜ್ಯ ಸುಡುವ ಪ್ರವೃತ್ತಿಗೆ ಕಡಿವಾಣ ‌ಸಮಿತಿ ರಚನೆ ಆದೇಶಕ್ಕೆ ಸುಪ್ರೀಂ ತಡೆ

ಪಿಟಿಐ
Published 26 ಅಕ್ಟೋಬರ್ 2020, 11:31 IST
Last Updated 26 ಅಕ್ಟೋಬರ್ 2020, 11:31 IST
ಪಂಜಾಬ್‌ನಲ್ಲಿ ಬೆಳೆ ತ್ಯಾಜ್ಯ ಸುಟ್ಟಿರುವುದರಿಂದ ವಾತಾವರಣಕ್ಕೆ ಹೊಗೆ ಸೇರುತ್ತಿರುವುದು (ಸಂಗ್ರಹ ಚಿತ್ರ)
ಪಂಜಾಬ್‌ನಲ್ಲಿ ಬೆಳೆ ತ್ಯಾಜ್ಯ ಸುಟ್ಟಿರುವುದರಿಂದ ವಾತಾವರಣಕ್ಕೆ ಹೊಗೆ ಸೇರುತ್ತಿರುವುದು (ಸಂಗ್ರಹ ಚಿತ್ರ)   

ನವದೆಹಲಿ: ಬೆಳೆ ತ್ಯಾಜ್ಯ ಸುಡುವ ಪ್ರವೃತ್ತಿ ತಡೆಯಲು ನೆರೆ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು‌ ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರೆ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚಿಸುವ ತನ್ನ ಅ.16ರ ಆದೇಶವನ್ನು ಸುಪ್ರಿಂ ಕೋರ್ಟ್ ಸೋಮವಾರ ತಡೆ ಹಿಡಿಯಿತು.

ದೆಹಲಿ–ರಾಷ್ಟ್ರ ರಾಜಧಾನಿ ವಲಯದಲ್ಲಿ(ಎನ್‌ಸಿಆರ್) ವಾಯು ಮಾಲಿನ್ಯಕ್ಕೆನೆರೆ ರಾಜ್ಯಗಳಲ್ಲಿನ ಕೃಷಿ ತ್ಯಾಜ್ಯ ಸುಡುವ ಪ್ರವೃತ್ತಿಯು ಪ್ರಮುಖ ಕಾರಣವಾಗಿದೆ. ಸುಡುವುದನ್ನು ತಡೆಯಲು ಆಯಾ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿತ್ತು.‌

ತ್ಯಾಜ್ಯ ಸುಡುವಿಕೆ ತಡೆಯುವುದು ಸೇರಿದಂತೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಮಗ್ರ ಶಾಸನ ರೂಪಿಸುವ ಚಿಂತನೆ ನಡೆದಿದೆ ಎಂಬ ಕೇಂದ್ರದ ನಿಲುವು ಒಪ್ಪಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠ ಈ ನಿರ್ಧಾರವನ್ನು ಪ್ರಕಟಿಸಿತು.

ADVERTISEMENT

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಸಮಗ್ರವಾಗಿ ಪರಿಶೀಲಿಸಿದೆ. ಉದ್ದೇಶಿತ ಕಾಯ್ದೆಗೆ ಸಂಬಂಧಿಸಿದ ಕರಡು ಮಸೂದೆಯನ್ನು ನಾಲ್ಕು ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.