ADVERTISEMENT

ಸಿಐಸಿ ಮುಖ್ಯಸ್ಥರಾಗಿ ಸುಧೀರ್‌ ಭಾರ್ಗವ

ನಾಲ್ವರು ಮಾಹಿತಿ ಆಯುಕ್ತರ ನೇಮಕ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 19:12 IST
Last Updated 31 ಡಿಸೆಂಬರ್ 2018, 19:12 IST
ಸುಧೀರ್‌ ಭಾರ್ಗವ
ಸುಧೀರ್‌ ಭಾರ್ಗವ   

ನವದೆಹಲಿ : ಸುಧೀರ್‌ ಭಾರ್ಗವ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಾಲ್ವರು ನಿವೃತ್ತ ಅಧಿಕಾರಿಗಳನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಆದೇಶ ಹೊರಡಿಸಿದ್ದಾರೆ. .

ಭಾರ್ಗವ ಅವರು ಇದುವರೆಗೂ ಮಾಹಿತಿ ಆಯುಕ್ತರಾಗಿದ್ದರು. 11 ಸದಸ್ಯರು ಇರಬೇಕಾದ ಜಾಗದಲ್ಲಿ ಆಯೋಗದಲ್ಲಿ ಇದುವರೆಗೂ ಮೂವರು ಕಾರ್ಯ ನಿರ್ವಹಿಸುತ್ತಿದ್ದರು.

ನಿವೃತ್ತ ಐಎಫ್‌ಎಸ್‌ ಅಧಿಕಾರಿ ಯಶ್‌ವರ್ಧನ್‌ ಕುಮಾರ್‌ ಸಿನ್ಹಾ, ನಿವೃತ್ತ ಐಆರ್‌ಎಸ್‌ ಅಧಿಕಾರಿ ವನಜಾ ಎನ್‌. ಸರ್ನಾ, ನಿವೃತ್ತ ನೀರಜ್‌ ಕುಮಾರ್‌ ಗುಪ್ತಾ ಹಾಗೂ ಕಾನೂನು ಇಲಾಖೆ ಮಾಜಿ ಕಾರ್ಯದರ್ಶಿ ಸುರೇಶ್‌ ಚಂದ್ರ ಅವರು ಆಯುಕ್ತರಾಗಿ ನೇಮಕಗೊಂಡವರು. ನೇಮಕಗೊಂಡ ನಾಲ್ವರು ಅಧಿಕಾರಿಗಳು ಕೂಡ ಈ ವರ್ಷವೇ ನಿವೃತ್ತರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.