ADVERTISEMENT

ಕಾಸರಗೋಡು: ಸೂರ್ಯಾಘಾತ ಮತ್ತೆ ಇಬ್ಬರಿಗೆ ಗಾಯ

ಕಾಸರಗೋಡಿನಲ್ಲಿ ಮುಂದುವರಿದ ಉರಿಬಿಸಿಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 18:51 IST
Last Updated 2 ಏಪ್ರಿಲ್ 2019, 18:51 IST

ಕಾಸರಗೋಡು: ಕಾಸರಗೋಡು ಸುತ್ತಮುತ್ತ ಬಿಸಿಲಿನ ಝಳ ಮಂಗಳವಾರವೂ ಮುಂದುವರಿದಿದ್ದು, ಸೂರ್ಯನ ಬಿಸಿಲಿನ ಪ್ರಖರತೆಗೆ ಮತ್ತೆ ಇಬ್ಬರಿಗೆ ಸುಟ್ಟ ಗಾಯಗಳಾಗಿವೆ.

ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕ ಅದೂರು 17ನೇ ಮೈಲಿನ ಸಂಜೀವ ಭಂಡಾರಿ (65) ಅವರ ಬೆನ್ನಿನ ಮೇಲೆ ಬಿಸಿಲಿನಿಂದ ಗುಳ್ಳೆಗಳು ಉಂಟಾಗಿದೆ. ಪೈಕ ಚೆಂಡೆತ್ತೋಡು ಚಂದಂಪಾರ ಎಂಬಲ್ಲಿ ಮುಹಮ್ಮದ್ ಅಲ್ಫೈದ್ ಆಲಿ ಎಂಬ ಆರು ವರ್ಷದ ಮಗುವಿಗೆ ಬಿಸಿಲಿನಿಂದ ಸುಟ್ಟ ಗಾಯಗಳಾಗಿವೆ.

ಇವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಈ ಮಧ್ಯೆ, ಕುಂಬಳೆಯ ನಾಯ್ಕಾಪಿನಲ್ಲಿ ಬಿಸಿಲಿನಿಂದ ಗಾಯಗೊಂಡಿದ್ದ ಇಬ್ಬರು ಮಕ್ಕಳು ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.