ADVERTISEMENT

ಸಿಝಡ್‌ಎಂಪಿಗೆ ಸಿದ್ಧತೆ: ವಿಚಾರಣೆಗೆ ಸಮಯ ನೀಡಲು ಸುಪ್ರೀಂ ಕೋರ್ಟ್ ನಕಾರ

ಪಿಟಿಐ
Published 8 ಜುಲೈ 2021, 12:14 IST
Last Updated 8 ಜುಲೈ 2021, 12:14 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕರಾವಳಿ ವಲಯ ನಿರ್ವಹಣಾ ಯೋಜನೆಗೆ (ಸಿಝಡ್‌ಎಂಪಿ) ಸಿದ್ಧತೆಗೆ ಸಂಬಂಧಿಸಿದ ವಿಚಾರಣೆಗೆ ಇನ್ನಷ್ಟು ಕಾಲಾವಕಾಶವನ್ನು ಕೊಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಸ್‌.ಎ.ನಜೀರ್ ಮತ್ತು ಕೃಷ್ಣಮೂರ್ತಿ ಅವರಿದ್ದ ಪೀಠವು ಈ ಸಂಬಂಧ ಸೇವಾ ಸಂಸ್ಥೆಯಾದ ಗೋವಾ ಫೌಂಡೇಷನ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.

ಗೋವಾ ಫೌಂಡೇಷನ್ ಪರ ಹಾಜರಿದ್ದ ಹಿರಿಯ ವಕೀಲ ಸಂಜಯ್ ಪಾರಿಖ್‌, ’ರಾಜ್ಯದಲ್ಲಿ ಲಾಕ್‌ಡೌನ್ ಜುಲೈ 12ರವರೆಗೂ ವಿಸ್ತರಣೆಯಾಗಿದೆ. ಲಾಕ್‌ ಡೌನ್‌, ಕರ್ಫ್ಯೂ ಕಾರಣದಿಂದ ವಿಚಾರಣೆಯ ಸಂದರ್ಭದಲ್ಲಿ ಮೀನುಗಾರರು, ಗ್ರಾಮೀಣ ಜನರು ಬರಲಾಗದು’ ಎಂದು ವಾದಿಸಿದ್ದರು.

ADVERTISEMENT

ಇದಕ್ಕೆ ಸುಪ್ರೀಂ ಕೋರ್ಟ್‌, ಏನು ಕರ್ಫ್ಯೂ. ನಮಗೆ ಆ ಪ್ರದೇಶದ ಅರಿವು ಚೆನ್ನಾಗಿದೆ. ನೀವು ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಸಮಯ ವಿಸ್ತರಣೆ ಕೇಳಿ. ಅದು ಪಂಚ ಸದಸ್ಯರ ಪೀಠ.ಅರ್ಜಿ ವಜಾ ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.