ADVERTISEMENT

ಐಚ್ಛಿಕ ಶುಲ್ಕ ಸಂಗ್ರಹ ನಿಲ್ಲಿಸಿ: ಕರ್ನಾಟಕ ವಕೀಲರ ಪರಿಷತ್‌ಗೆ SC ನಿರ್ದೇಶನ

ಪಿಟಿಐ
Published 9 ಆಗಸ್ಟ್ 2025, 15:59 IST
Last Updated 9 ಆಗಸ್ಟ್ 2025, 15:59 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ‘ಕಾನೂನು ಪದವೀಧರರು ವಕೀಲರಾಗಿ ತಮ್ಮ ಸನ್ನದು ನೋಂದಣಿ ಮಾಡಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಷತ್ ಶಾಸನಬದ್ಧ ಶುಲ್ಕವನ್ನು ಮಾತ್ರವೇ ಸಂಗ್ರಹಿಸಬೇಕು. ಅದನ್ನು ಹೊರತುಪಡಿಸಿ ಯಾವುದೇ ‘ಐಚ್ಛಿಕ’ ಶುಲ್ಕ ಸಂಗ್ರಹಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ನಿರ್ದೇಶಿಸಿದೆ.

‘ವಕೀಲರ ಕಾಯ್ದೆ– 1961ರ ಅನ್ವಯ ನಿಗದಿತ ಕಾನೂನುಬದ್ಧ ಶುಲ್ಕವನ್ನಷ್ಟೇ ಪಡೆಯಬೇಕು ಮತ್ತು ಐಚ್ಛಿಕ ಶುಲ್ಕ ಸಂಗ್ರಹಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಜೆ.ಬಿ. ಪಾರ್ದೀವಾಲಾ ಹಾಗೂ ಆರ್‌. ಮಹದೇವನ್‌ ಅವರಿದ್ದ ಪೀಠವು ತಾಕೀತು ಮಾಡಿದೆ.

ADVERTISEMENT

ನೋಂದಣಿ ಸಂದರ್ಭದಲ್ಲಿ ಅತಿಯಾದ ಶುಲ್ಕ ವಿಧಿಸದಂತೆ ಕಳೆದ ವರ್ಷದ ಜುಲೈನಲ್ಲಿ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ವಕೀಲರ ಪರಿಷತ್‌ ಪಾಲಿಸುತ್ತಿಲ್ಲ ಎಂದು ದೂರಿ ಕೆ.ಎಲ್‌.ಜೆ.ಎ. ಕಿರಣ್‌ ಬಾಬು ಸಲ್ಲಿಸಿದ್ದ ನ್ಯಾಯಾಂಗ ನಿಂದನೆಯ ಅರ್ಜಿ ವಿಚಾರಣೆ ನಡೆಸಿದ ಪೀಠವು ಈ ನಿರ್ದೇಶನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.