ನವದೆಹಲಿ: ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿಇಎ) ಕಾರ್ಯದರ್ಶಿಯಾಗಿ ಕರ್ನಾಟಕ ಕೇಡರ್ನ 1987ನೇ ತಂಡದ ಐಎಎಸ್ ಅಧಿಕಾರಿ ಅಜಯ್ ಸೇಠ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಇದುವರೆಗೂ ಈ ಸ್ಥಾನದಲ್ಲಿದ್ದ ಹರಿಯಾಣ ಕೇಡರ್ನ 1988ನೇ ತಂಡದ ಅಧಿಕಾರಿ ತರುಣ್ ಬಜಾಜ್ ಅವರನ್ನು ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ಇವರನ್ನು ಒಳಗೊಂಡು ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶಿಸಿದ್ದು, ವಿವರಗಳು ಹೀಗಿವೆ.
ರಾಜಾ ರಿಜ್ವಿ, ಕಾರ್ಯದರ್ಶಿ, ಸಾರ್ವಜನಿಕ ಉದ್ಯಮಗಳ ಸಚಿವಾಲಯ,
ಇಂಡೀವರ್ ಪಾಂಡೆ, ಕಾರ್ಯದರ್ಶಿ, ಆಡಳಿತ ಸುಧಾರಣಾ ಇಲಾಖೆ.
ಅಂಜಲಿ ಭಾವ್ರಾ, ಕಾರ್ಯದರ್ಶಿ ಅಂಗವಿಕಲರ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ ಸಚಿವಾಲಯ.
ಜಿತೇಂದ್ರ ನಾಥ್ ಸ್ವೇನ್, ವ್ಯವಸ್ಥಾಪಕ ನಿರ್ದೇಶಕ, ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ.
ಅನಿಲ್ ಕುಮಾರ್ ಝಾ, ಕಾರ್ಯದರ್ಶಿ, ಬುಡಕಟ್ಟು ಜನರ ವ್ಯವಹಾರಗಳ ಸಚಿವಾಲಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.