ADVERTISEMENT

ನನ್ನ ಇಚ್ಛೆಗೆ ವಿರುದ್ಧ ವಿವಾಹ ನಡೆದಿತ್ತು: ಲಾಲು ಪುತ್ರ ತೇಜ್‌ ಪ್ರತಾಪ್

ಪಿಟಿಐ
Published 4 ನವೆಂಬರ್ 2018, 6:11 IST
Last Updated 4 ನವೆಂಬರ್ 2018, 6:11 IST
ತೇಜ್‌ ಪ್ರತಾಪ್‌ ಯಾದವ್‌ ವಿವಾಹದ ಸಂದರ್ಭದ ಚಿತ್ರ
ತೇಜ್‌ ಪ್ರತಾಪ್‌ ಯಾದವ್‌ ವಿವಾಹದ ಸಂದರ್ಭದ ಚಿತ್ರ   

ಪಟ್ನಾ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 6 ತಿಂಗಳುಗಳಲ್ಲೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ದೃಢಪಡಿಸಿದ್ದಾರೆ.

‘ಐಶ್ವರ್ಯಾ ರಾಯ್‌ ಅವರನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಒತ್ತಾಯಕ್ಕೆ ಮಣಿದು ವಿವಾಹವಾಗಿದ್ದೆ. ಈಗ ಉಸಿರು ಕಟ್ಟಿಕೊಂಡು ಜೀವನ ನಡೆಸುವುದಕ್ಕಿಂತ ವಿಚ್ಛೇದನ ಪಡೆಯುವುದು ಒಳಿತು ಎನಿಸಿತು. ಹಾಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ತೇಜ್‌ ಪ್ರತಾಪ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT