ADVERTISEMENT

54 ಮಂದಿ ಮೃತಪಟ್ಟಿದ್ದ ಸ್ಫೋಟ ಪ್ರಕರಣ: ಸಿಗಾಚಿ ಔಷಧ ಘಟಕದ ಸಿಇಒ ಬಂಧನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 18:35 IST
Last Updated 28 ಡಿಸೆಂಬರ್ 2025, 18:35 IST
ಅವಘಡ ಸಂಭವಿಸಿದ್ದ ಔಷಧ ಘಟಕ
ಅವಘಡ ಸಂಭವಿಸಿದ್ದ ಔಷಧ ಘಟಕ   

ಹೈದರಾಬಾದ್ (ಪಿಟಿಐ): 54 ಜನರ ಸಾವಿಗೆ ಕಾರಣವಾದ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧ ಕಾರ್ಖಾನೆ ಸ್ಫೋಟ ಪ್ರಕರಣ ಸಂಬಂಧ ಸಿಗಾಚಿ ಇಂಡಸ್ಟ್ರೀಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು (ಸಿಇಒ) ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಜೂನ್‌ 30ರಂದು ನಡೆದಿದ್ದ ಅವಘಡ ಸಂಬಂಧ ಔಷಧ ಕಾರ್ಖಾನೆಯ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್‌ ರಾಜ್‌ ಸಿನ್ಹಾ ಎರಡನೇ ಆರೋಪಿಯಾಗಿದ್ದರು. ಶನಿವಾರ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT