ನವದೆಹಲಿ: ಕೇರಳದಲ್ಲಿರುವ ಪದ್ಮನಾಭ, ಶಬರಿಮಲೆ, ಗುರುವಾಯೂರು ದೇವಾಲಯದಲ್ಲಿರುವ ಚಿನ್ನ ಮತ್ತು ಸಂಪತ್ತನ್ನು ಮಾರಿ ಪ್ರಳಯ ಪೀಡಿತ ಜಿಲ್ಲೆಯ ಜನರಿಗೆ ಸಹಾಯ ಮಾಡಿ ಎಂದು ದೆಹಲಿಯ ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದ್ದಾರೆ.
ಈ ಮೂರು ದೇವಾಲಯಗಳಲ್ಲಿರುವ ಸಂಪತ್ತು ಒಂದು ಲಕ್ಷ ಕೋಟಿಗಿಂತ ಹೆಚ್ಚು ಇದೆ. ₹21,000 ಕೋಟಿ ನಷ್ಟ ನೀಗಿಸಲು ಇದರಿಂದ ಸ್ವಲ್ಪ ಹಣವನ್ನು ಬಳಸಬಹುದು.ಜನರೇ ಈ ಬೇಡಿಕೆಯನ್ನೊಡ್ಡಬೇಕು.ಜನರು ಪ್ರಾಣ ಕಳೆದುಕೊಂಡು, ರೋಗಗಳಿಂದ ಬಳಲುತ್ತಿರುವಾಗ ಆ ಸಂಪತ್ತಿನಿಂದ ಏನು ಪ್ರಯೋಜನ ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.