ADVERTISEMENT

ಭಯೋತ್ಪಾದನೆಯ ಜಾಲದ ನಂಟು: ಪೊಲೀಸ್ ಕಸ್ಟಡಿಗೆ ಶಂಕಿತ ಉಗ್ರ

ಪಿಟಿಐ
Published 1 ಡಿಸೆಂಬರ್ 2025, 16:15 IST
Last Updated 1 ಡಿಸೆಂಬರ್ 2025, 16:15 IST
<div class="paragraphs"><p>ಉಗ್ರ</p></div>

ಉಗ್ರ

   

ನವದೆಹಲಿ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯ ಜಾಲದ ನಂಟು ಹೊಂದಿರುವ ಆರೋಪದಲ್ಲಿ ಬಂಧಿತರಾಗಿರುವ ಶಂಕಿತ ಮೂವರಲ್ಲಿ ಆಸೀಫ್‌ನನ್ನು (22) ವಿಚಾರಣೆಗಾಗಿ ಐದು ದಿನ ದೆಹಲಿ ನ್ಯಾಯಾಲಯವು ಪೊಲೀಸ್‌ ಕಸ್ಟಡಿಗೆ ನೀಡಿದೆ.

ಪಂಜಾಬ್‌ನ ಗುರುದಾಸ್‌ಪುರದ ನಗರ ಪೊಲೀಸ್‌ ಠಾಣೆ ಹೊರಭಾಗದಲ್ಲಿ ನ. 25ರಂದು ನಡೆದ ಗ್ರೆನೇಡ್‌ ದಾಳಿಯಲ್ಲಿ ಈ ಮೂವರು ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ADVERTISEMENT

ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಶ್ರೀಯಾ ಅಗರ್ವಾಲ್‌ ಮುಂಭಾಗ ದೆಹಲಿ ಪೊಲೀಸ್‌ ವಿಶೇಷ ಘಟಕವು ಸೋಮವಾರ ಆಸೀಫ್‌ನನ್ನು ಹಾಜರುಪಡಿಸಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಶೆಹಜಾದ್‌ ಭಟ್ಟಿ ಜೊತೆಗಿನ ಸಂಪರ್ಕವನ್ನು ಪ‍ತ್ತೆ ಹಚ್ಚಲು ಏಳು ದಿನ ಕಸ್ಟಡಿಗೆ ನೀಡುವಂತೆ ಕೋರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.