ADVERTISEMENT

ಬಿಜೆಪಿಯಿಂದ ಮತ್ತೆ ಟಿಎಂಸಿಗೆ ಮರಳಿದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2021, 10:36 IST
Last Updated 31 ಅಕ್ಟೋಬರ್ 2021, 10:36 IST
ರಾಜೀಬ್‌ ಬ್ಯಾನರ್ಜಿ
ರಾಜೀಬ್‌ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದ ರಾಜೀಬ್‌ ಬ್ಯಾನರ್ಜಿ ಭಾನುವಾರ ಮತ್ತೆ ಟಿಎಂಸಿಗೆ ಮರಳಿದರು.

ಏಪ್ರಿಲ್‌- ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ರಾಜೀಬ್‌ ಬ್ಯಾನರ್ಜಿ ಸೋತಿದ್ದರು.

ರಾಜೀಬ್‌ ಬ್ಯಾನರ್ಜಿ ಅವರು ಈ ಹಿಂದಿನ ಮಮತಾ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

ಇತ್ತೀಚೆಗಷ್ಟೇ ಬಿಜೆಪಿ ತೊರೆದಿದ್ದ ಆಶಿಶ್ ದಾಸ್ ಸಹ ರಾಜೀಬ್ ಅವರೊಂದಿಗೆ ಟಿಎಂಸಿ ಸೇರಿದ್ದಾರೆ. ಆಶಿಶ್‌ ದಾಸ್‌ ಅವರು ತ್ರಿಪುರಾ ಬಿಜೆಪಿಯ ಮಾಜಿ ಮುಖಂಡರು.

2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನೆಲೆಯೂರಲು ಟಿಎಂಸಿ ಪ್ರಯತ್ನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.