ನವದೆಹಲಿ: ‘ಪ್ರತಿಯೊಬ್ಬ ಭಾರತೀಯರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ’ ಎಂಬ ಪ್ರಧಾನಿ ಕಚೇರಿ ಟ್ವೀಟ್ಗೆ ‘ಇಂದು ಏಪ್ರಿಲ್ 1’ ಅಲ್ಲ ಎಂದು ಟಿಎಂಸಿ ಮುಖಂಡ ಡೆರಿಕ್ಒ ಬ್ರೇನ್ ಕಿಚಾಯಿಸಿದ್ದಾರೆ.
ಪ್ರಧಾನಿ ಕಚೇರಿ, ‘ನಾವೆಲ್ಲ ಒಂದೇ ಕುಟುಂಬದ ಸದಸ್ಯರು. ಇದುವೇ ಭಾರತದ ಚೇತನ. ಪ್ರತಿಯೊಬ್ಬ ಭಾರತೀಯನು ಖುಷಿ ಮತ್ತು ಆರೋಗ್ಯವಾಗಿರಬೇಕು ಎಂದೇ ನಾವು ಬಯಸುತ್ತೇವೆ. ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಮಾರ್ಗದರ್ಶನದಲ್ಲಿ ಭಾರತದ ಪ್ರತೀ ಪ್ರಜೆಯ ಕಲ್ಯಾಣಕ್ಕಾಗಿ ನಾವು ಕೆಲಸ ಮಾಡುತ್ತೇವೆ’ ಎಂದು ಟ್ವೀಟ್ನಲ್ಲಿ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಮುಖಂಡ ‘ಇಂದು ಏಪ್ರಿಲ್ 1 ಅಲ್ಲ. ಏಪ್ರಿಲ್ 1 ಅನ್ನು ಮೂರ್ಖರ ದಿನ ಎಂದೂ ಕರೆಯುತ್ತಾರೆ’ ಎಂದು ವ್ಯಂಗ್ಯ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.