ಮುಂಬೈ: ಟಿಆರ್ಪಿ ಹಗರಣದ ಸಂಬಂಧ ಮುಂಬೈ ಪೊಲೀಸರು ಇಂದು ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ (ಬಿಎಆರ್ಸಿ–ಬಾರ್ಕ್) ಮಾಜಿ ಮುಖ್ಯ ನಿರ್ವಹಣಾಧಿಕಾರಿ ರೊಮಿಲ್ ರಾಮ್ಗರ್ಹಿಯಾ ಅವರನ್ನು ಬಂಧಿಸಿದ್ದಾರೆ. ಇವರು ಹಗರಣದ ಸಂಬಂಧ ಬಂಧಿಸಲಾದ 14ನೇ ಆರೋಪಿ.
ತನಿಖೆಯಲ್ಲಿ ಹಗರಣದಲ್ಲಿ ಇವರ ಪಾತ್ರವೂ ಇರುವುದು ತಿಳಿದುಬಂದಿತ್ತು. ಹೀಗಾಗಿ, ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು. ಭಾನುವಾರ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಸಿಇಒ ವಿಕಾಸ್ ಖಾನ್ಚಂದಾನಿರನ್ನು ಬಂಧಿಸಿದ್ದು, ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.
ಕಾರ್ಯಕ್ರಮಗಳ ವೀಕ್ಷಣೆಯ ಶ್ರೇಣಿ ನಿಗದಿಪಡಿಸಲು ಆಯ್ದ ಮನೆಗಳಲ್ಲಿ ಮಾಪಕಗಳನ್ನು ಅಳವಡಿಸಲು ಬಿಎಆರ್ಸಿ ಹಂಸಾ ಸಂಸ್ಥೆಯನ್ನು ನಿಯೋಜಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.