ADVERTISEMENT

ಸ್ವಾವಲಂಬಿ ರಾಷ್ಟ್ರವಾಗಿಸುವ ಸಾರ್ವಜನಿಕ ನೀತಿ ಜಾರಿಗೆ ತನ್ನಿ: ಉಪರಾಷ್ಟ್ರಪತಿ

‘ನಾಗರಿಕ ಸೇವಾ ದಿನ‘ದ ಅಂಗವಾಗಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ

ಪಿಟಿಐ
Published 21 ಏಪ್ರಿಲ್ 2021, 8:01 IST
Last Updated 21 ಏಪ್ರಿಲ್ 2021, 8:01 IST
ವೆಂಕಯ್ಯನಾಯ್ಡು
ವೆಂಕಯ್ಯನಾಯ್ಡು   

ನವದೆಹಲಿ:ದೇಶವನ್ನು ಸ್ವಾವಲಂಬಿಯಾಗಿಸುವಂತಹ ಸಾರ್ವಜನಿಕ ನೀತಿಗಳನ್ನು ಜಾರಿಗೆ ತರಲು ಪ್ರಯತ್ನಿಸುವಂತೆ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ದೇಶದ ಸರ್ಕಾರಿ ನೌಕರರಿಗೆ ಕರೆ ನೀಡಿದರು.

‘ನಾಗರಿಕ ಸೇವಾ ದಿನ‘ದ ಅಂಗವಾಗಿ ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ಜನರ ನಿರೀಕ್ಷೆಗೆ ತಕ್ಕಂತೆ ಹಾಗೂ ಸಂವಿಧಾನ ಮೌಲ್ಯಗಳನ್ನು ಪ್ರತಿಬಿಂಬಿಸುವಂತೆ ಭಾರತದ ಆಡಳಿತದ ರಚನೆಯನ್ನು ಮರುರೂಪಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

‘ಇದು ದೇಶವನ್ನು ಪರಿವರ್ತಿಸುವ ಸಯಮವಾಗಿದೆ. ದೇಶವನ್ನು ಸ್ವಾವಲಂಬಿ(ಆತ್ಮನಿರ್ಭರ)ಯಾಗಿಸುವಂತಹ ಸಾರ್ವಜನಿಕ ನೀತಿಯನ್ನು ಜಾರಿಗೆ ತರಲು ನಿರಂತರವಾಗಿ ಪ್ರಯತ್ನಿಸಬೇಕು‘ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

1947ರ ಇದೇ ದಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ನಾಗರಿಕ ಸೇವಾ ಅಧಿಕಾರಿಗಳನ್ನು 'ಭಾರತದ ಉಕ್ಕಿನ ಚೌಕಟ್ಟು' ಎಂದು ಬಣ್ಣಿಸಿದ್ದರು ಎಂದು ನಾಯ್ಡು ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.