ADVERTISEMENT

ರಾಮ ಮಂದಿರ: ಜನಸಂದಣಿ ನಿರ್ವಹಣೆಗೆ ಸಲಹೆ ನೀಡಿದ ಟಿಟಿಡಿ

ಪಿಟಿಐ
Published 14 ಏಪ್ರಿಲ್ 2024, 14:25 IST
Last Updated 14 ಏಪ್ರಿಲ್ 2024, 14:25 IST
ಅಯೋಧ್ಯೆಯ ರಾಮ ಮಂದಿರ
ಅಯೋಧ್ಯೆಯ ರಾಮ ಮಂದಿರ   

ತಿರುಪತಿ: ರಾಮ ಮಂದಿರ ಟ್ರಸ್ಟ್‌ನ ಆಹ್ವಾನದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಎಂಜಿನಿಯರ್‌ಗಳ ತಂಡವು ಅಯೋಧ್ಯೆಗೆ ಭೇಟಿ ನೀಡಿ, ದೇವಸ್ಥಾನದಲ್ಲಿ ಜನಸಂದಣಿಯ ನಿರ್ವಹಣೆ ಕುರಿತು ತಾಂತ್ರಿಕ ಸಲಹೆಗಳನ್ನು ನೀಡಿತು. 

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಧರ್ಮಾ ರೆಡ್ಡಿ ಹಾಗೂ ರಾಮ ಮಂದಿರ ಟ್ರಸ್ಟ್‌ನ ಸಂಘಟಕರ ನಡುವೆ ಸಭೆ ನಡೆಯಿತು ಎಂದು ಟಿಟಿಡಿ ಪತ್ರಿಕಾ ‍ಪ್ರಕಟಣೆಯಲ್ಲಿ ತಿಳಿಸಿದೆ. ಜನಸಂದಣಿ ನಿರ್ವಹಣೆ, ಸರತಿ ಸಾಲುಗಳು, ನೀರಿನ ಸೌಲಭ್ಯ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಕುರಿತು ತಾಂತ್ರಿಕ ಸಲಹೆಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಟ್ರಸ್ಟ್‌ಗೆ ಸಲ್ಲಿಸಲಾಯಿತು ಎಂದು ತಿಳಿಸಲಾಗಿದೆ. 

ಏ.13ರಂದು ನಡೆದ ಸಭೆಯಲ್ಲಿ ಟಿಟಿಡಿಯ ತಾಂತ್ರಿಕ ಸಲಹೆಗಾರರಾದ ರಾಮಚಂದ್ರ ರೆಡ್ಡಿ ಮತ್ತು ಇತರ ಅಧಿಕಾರಿಗಳು, ರಾಮ ಮಂದಿರ ಟ್ರಸ್ಟ್‌ ಪರವಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿಗಳಾದ ಚಂಪತ್‌ ರಾಯ್‌ ಸೇರಿದಂತೆ ಇತರ ಅಧಿಕಾರಿಗಳು ಭಾಗಿಯಾಗಿದ್ದರು. 

ADVERTISEMENT

ಟ್ರಸ್ಟ್‌ ಕೋರಿಕೆಯ ಮೇರೆಗೆ ಟಿಟಿಡಿಯ ಅಧಿಕಾರಿಗಳ ತಂಡವು ಕಳೆದ ಫೆ.16 ಮತ್ತು 17ರಂದು ಅಯೋಧ್ಯೆಗೆ ಭೇಟಿ ನೀಡಿ ದಟ್ಟಣೆ ಉಂಟಾಗದಂತೆ ದೇವರ ದರ್ಶನಕ್ಕೆ ಟಿಟಿಡಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿತ್ತು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.