ADVERTISEMENT

ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ, ಅದೊಂದು ಯುದ್ಧ: TVK ಮುಖ್ಯಸ್ಥ ವಿಜಯ್

ಪಿಟಿಐ
Published 25 ಜನವರಿ 2026, 14:00 IST
Last Updated 25 ಜನವರಿ 2026, 14:00 IST
<div class="paragraphs"><p>ವಿಜಯ್</p></div>

ವಿಜಯ್

   

(ಪಿಟಿಐ ಚಿತ್ರ)

ಮಾಮಲ್ಲಪುರಂ/ಚೆನ್ನೈ: ‘ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ; ಅದೊಂದು ಪ್ರಜಾಪ್ರಭುತ್ವದ ಯುದ್ಧ. ಕಮಾಂಡರ್‌ಗಳಾದ ನೀವುಗಳೇ ಈ ಯುದ್ಧದ ನೇತೃತ್ವ ವಹಿಸುತ್ತೀರಿ’ ಎಂದು ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್‌ ತಮ್ಮ ಕಾರ್ಯಕರ್ತರಿಗೆ ಹೇಳಿದರು.

ADVERTISEMENT

‘ಅದು ದುಷ್ಟ ಶಕ್ತಿಯಾಗಲಿ (ಡಿಎಂಕೆ ಉದ್ದೇಶಿ ಹೇಳಿದ್ದು) ಅಥವಾ ಭ್ರಷ್ಟರ ಪಡೆ ಇರಲಿ (ಎಐಎಡಿಎಂಕೆ ಉದ್ದೇಶಿಸಿ ಹೇಳಿದ್ದು) ಈ ಎರಡೂ ಪಡೆಗಳು ತಮಿಳುನಾಡಿನಲ್ಲಿ ಆಡಳಿತ ನಡೆಸಬಾರದು. ಇಂಥ ಪಕ್ಷಗಳನ್ನು ವಿರೋಧಿಸುವ ನಿಜವಾದ ಧೈರ್ಯ ನಮಗೆ ಮಾತ್ರವೇ ಇದೆ’ ಎಂದರು.

ತಾವು ಪಕ್ಷದ ಸ್ಥಾಪಿಸಿದ ಉದ್ದೇಶದ ಕುರಿತು ಮಾತನಾಡಿದರ ವಿಜಯ್, ‘ಈ ನೆಲಕ್ಕೆ ಹಾನಿ ಉಂಟು ಮಾಡುವವರಿಂದ ಈ ನೆಲವನ್ನು ರಕ್ಷಿಸಲು ನಾವು ಇಲ್ಲಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ರಾಜಕಾರಣದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದರು. ತಮ್ಮ ಪಕ್ಷದ ಚಿಹ್ನೆ ‘ಸೀಟಿ’ಅನ್ನು ಊದುವುದರ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.

‘ಡಿಎಂಕೆಗೆ ಇದು ಕೊನೇ ಚುನಾವಣೆ’
‘ಡಿಎಂಕೆ ಪಕ್ಷವು ಇನ್ನೆಂದಿಗೂ ಅಧಿಕಾರಕ್ಕೆ ಬರುವುದಿಲ್ಲ. ಇದು ಅದರ ಕೊನೇ ಚುನಾವಣೆ. ಈ ಪಕ್ಷವು ಜನರ ವಿಶ್ವಾಸ ಕಳೆದುಕೊಂಡು ಅವರ ಆಕ್ರೋಶಕ್ಕೆ ಗುರಿಯಾಗಿದೆ’ ಎಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಇ.ಕೆ. ಪಳನಿಸ್ವಾಮಿ ಹೇಳಿದರು. ‘ಸರ್ಕಾರಿ ಕೆಲಸಗಾರರು ಶಿಕ್ಷಕರು ರಕ್ಷಣಾ ಕಾರ್ಯಕರ್ತರು ನರ್ಸ್‌ಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಿಳುನಾಡು ರಣರಂಗವಾಗಿ ಮಾರ್ಪಟ್ಟಿದೆ. 2021ರಲ್ಲಿ ತಾನು ನೀಡಿದ್ದ ಚುನಾವಣಾ ಭರವಸೆಗಳಲ್ಲಿ ನಾಲ್ಕನೇ ಒಂದು ಭಾಗದಷ್ಟನ್ನೂ ಡಿಎಂಕೆ ಈಡೇರಿಸಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.