ADVERTISEMENT

ಸಿಖ್‌ ಬೋಧಕ ಆತ್ಮಹತ್ಯೆ

ಪಿಟಿಐ
Published 16 ಡಿಸೆಂಬರ್ 2020, 19:35 IST
Last Updated 16 ಡಿಸೆಂಬರ್ 2020, 19:35 IST

ಚಂಡೀಗಡ: ಸಿಖ್ ಧರ್ಮಬೋಧಕ ಸಂತ ರಾಮಸಿಂಗ್‌ (65) ಎಂಬುವರು ಸಿಂಘು ಗಡಿಯ ಸಮೀಪ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಇವರು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಅವರ ಶವದ ಬಳಿ ಬಂಜಾಬಿ ಭಾಷೆಯಲ್ಲಿ ಬರೆದ ಪತ್ರವೊಂದು ಲಭಿಸಿದ್ದು ಅದರಲ್ಲಿ, ‘ದೌರ್ಜನ್ಯ ಅನುಭವಿಸುವುದು ಮತ್ತು ಅದಕ್ಕೆ ಸಾಕ್ಷಿಯಾಗುವುದು ಪಾಪ. ರೈತರ ಕಷ್ಟಗಳನ್ನು ನನ್ನಿಂದ ನೋಡಲಾಗುತ್ತಿಲ್ಲ’ ಎಂದು ಬರೆಯಲಾಗಿದೆ. ಪತ್ರವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT