ಕಾನ್ಪುರ: ಮಗ್ಗಿ ತಪ್ಪಾಗಿ ಹೇಳಿದ ಕಾರಣಕ್ಕೆ 9 ವರ್ಷದ ಅಪ್ರಾಪ್ತ ಬಾಲಕನ ಕೈಯನ್ನು ಪವರ್ ಡ್ರಿಲ್ ಮೆಶಿನ್ನಿಂದ ಕೊರೆದು ಶಿಕ್ಷಕ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಕಾನ್ಪುರದ ಪ್ರೇಮ್ನಗರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕನನ್ನು ಅನುಜ್ ಪಾಂಡೆ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಕಾಶ್ಮೀರದ 3 ಜಿಲ್ಲೆಗಳು ಉಗ್ರರಿಂದ ಮುಕ್ತ: ಎಡಿಜಿಪಿ
ದುರಸ್ತಿ ನಡೆಯುತ್ತಿದ್ದ ಶಾಲೆಯ ಗ್ರಂಥಾಲಯದಲ್ಲಿ ಮೇಲುಸ್ತುವಾರಿ ವಹಿಸುತ್ತಿದ್ದ ಶಿಕ್ಷಕ, ಅಲ್ಲಿ ಹಾದು ಹೋಗುತ್ತಿದ್ದ ವಿದ್ಯಾರ್ಥಿಯಲ್ಲಿ ಮಗ್ಗಿ ಹೇಳಲು ತಿಳಿಸುತ್ತಾನೆ. ಆದರೆ ವಿದ್ಯಾರ್ಥಿಗೆ ಮಗ್ಗಿ ಬಾರದ್ದಕ್ಕೆ ಕುಪಿತಗೊಂಡು ವಿದ್ಯುತ್ ಚಾಲಿತ ಡ್ರಿಲ್ ಮೆಶಿನ್ ಬಳಸಿ ಕೈ ಕೊರೆದು ಗಾಯಗೊಳಿಸುತ್ತಾನೆ.
ಗುರುವಾರ ಈ ಘಟನೆ ನಡೆದಿದ್ದು, ಬಾಲಕನ ಪೋಷಕರು ಹಾಗೂ ಮಕ್ಕಳು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಶಿಕ್ಷಕನನ್ನು ಅಮಾನತುಗೊಳಿಸಿರುವ ಶಿಕ್ಷಣಾಧಿಕಾರಿ ತನಿಖೆಗಾಗಿ ಮೂವರು ಸದಸ್ಯರ ತಂಡವನ್ನು ರಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.