ADVERTISEMENT

ಉತ್ತರಾಖಂಡ ದುರಂತ: ಹೊಸದಾಗಿ 5 ಮೃತದೇಹ ಪತ್ತೆ, 56ಕ್ಕೆ ಏರಿದ ಸಾವಿನ ಸಂಖ್ಯೆ

ಏಜೆನ್ಸೀಸ್
Published 15 ಫೆಬ್ರುವರಿ 2021, 16:26 IST
Last Updated 15 ಫೆಬ್ರುವರಿ 2021, 16:26 IST
ನೀರ್ಗಲ್ಲು ಕುಸಿದ ಎರಡು ದಿನಗಳ ನಂತರ ಚಮೋಲಿ ಜಿಲ್ಲೆಯ ಪ್ರದೇಶವೊಂದರ ವೈಮಾನಿಕ ದೃಶ್ಯ
ನೀರ್ಗಲ್ಲು ಕುಸಿದ ಎರಡು ದಿನಗಳ ನಂತರ ಚಮೋಲಿ ಜಿಲ್ಲೆಯ ಪ್ರದೇಶವೊಂದರ ವೈಮಾನಿಕ ದೃಶ್ಯ   

ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ಇದುವರೆಗೆ 56 ಮೃತ ದೇಹಗಳನ್ನು ಪತ್ತೆಮಾಡಲಾಗಿದೆ. ಸುಮಾರು 148 ಮಂದಿ ಜನರು ಈಗಲೂ ಪತ್ತೆಯಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ಇಂದು (ಸೋಮವಾರ) ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಹೊಸದಾಗಿ 5 ಮೃತದೇಹಗಳು ಪತ್ತೆಯಾಗಿವೆ.

ಫೆಬ್ರುವರಿ 7 ಭಾನುವಾರದಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ-ರೈನಿ ಪ್ರದೇಶದಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಧೌಲಿಗಂಗಾ ಹಾಗೂ ಅಲಕಾನಂದ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿತ್ತು. ಪ್ರವಾಹದ ತೀವ್ರತೆಗೆ ರಿಷಿಗಂಗಾ ವಿದ್ಯುತ್ ಯೋಜನೆ ಹಾನಿಗೊಳಗಾಗಿತ್ತು.

ADVERTISEMENT

ಬಹುತೇಕ ಮೃತದೇಹಗಳನ್ನು ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಉತ್ತರಾಖಂಡ ರಾಜ್ಯ ವಿಪತ್ತು ನಿರ್ಹಹಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.