ಚೆನ್ನೈ: ತಮಿಳುನಾಡಿನಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ.
2009ರಲ್ಲಿ ಆಗಿನ ಡಿಎಂಕೆ ಸರ್ಕಾರ ದಾಖಲಿಸಿದ್ದ ದೇಶದ್ರೋಹದ ಪ್ರಕರಣದಲ್ಲಿ ವೈಕೊ ಅವರಿಗೆ ನ್ಯಾಯಾಲಯ ಒಂದು ವರ್ಷದ ಸಜೆ ವಿಧಿಸಿತ್ತು. ಇದೇ ಕಾರಣದಿಂದ ಅವರ ನಾಮಪತ್ರ ಅಂಗೀಕಾರ ಆಗುವುದರ ಬಗ್ಗೆ ಶಂಕೆ ಮೂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.