ADVERTISEMENT

ವಂದೇ ಭಾರತ್ ಮಿಷನ್: ತಾಯ್ನಾಡಿಗೆ ಬರಲಿದ್ದಾರೆ ಬಾಂಗ್ಲಾದೇಶದಲ್ಲಿರುವ ಭಾರತೀಯರು

ಏಜೆನ್ಸೀಸ್
Published 8 ಮೇ 2020, 5:45 IST
Last Updated 8 ಮೇ 2020, 5:45 IST
ವಿಮಾನ ಹತ್ತುವ ಮುನ್ನ ದಾಖಲೆ ಪತ್ರ ದೃಢೀಕರಿಸುತ್ತಿರುವ ವಿದ್ಯಾರ್ಥಿಗಳು  (ಟ್ವಿಟರ್)
ವಿಮಾನ ಹತ್ತುವ ಮುನ್ನ ದಾಖಲೆ ಪತ್ರ ದೃಢೀಕರಿಸುತ್ತಿರುವ ವಿದ್ಯಾರ್ಥಿಗಳು (ಟ್ವಿಟರ್)   

ನವದೆಹಲಿ:ಕೊರೊನಾವೈರಸ್ ಲಾಕ್‍ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ವಂದೇ ಭಾರತ್ ವಿಷನ್‌ನಎರಡನೇ ಹಂತದಲ್ಲಿ ಬಾಂಗ್ಲಾದೇಶದಲ್ಲಿರುವ ಭಾರತೀಯರು ಶುಕ್ರವಾರ ಶ್ರೀನಗರಕ್ಕೆ ತಲುಪಲಿದ್ದಾರೆ.

ಏರ್ ಇಂಡಿಯಾ ವಿಮಾನವು ಢಾಕಾದಿಂದ ಹೊರಡಲಿದ್ದು, ಬಾಂಗ್ಲಾದೇಶದಿಂದ ಬರುತ್ತಿರುವ ವಿದ್ಯಾರ್ಥಿಯೊಬ್ಬ ಭಾರತೀಯ ರಾಯಭಾರಿ ಕಚೇರಿಗೆ ಧನ್ಯವಾದ ಹೇಳಿವಿಡಿಯೊ ಟ್ವೀಟ್ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿರುವ ವಿದ್ಯಾರ್ಥಿಗಳನ್ನು ನಾವು ಇವತ್ತು ಕಳುಹಿಸಲು ಸಿದ್ಧತೆ ಮಾಡಿದ್ದೇವೆ.ಢಾಕಾದಿಂದ ಮೊದಲ ಏರ್ ಇಂಡಿಯಾ ವಿಮಾನ ಹೊರಡಲಿದ್ದು 2020 ಮೇ.8ರಂದು ತಲುಪಲಿದೆ. ಇನ್ನೂ ಹೆಚ್ಚಿನ ವಿಮಾನಗಳು ಹೊರಡಲು ಸಿದ್ಧವಾಗಿವೆ ಎಂದು ಶುಕ್ರವಾರ ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ADVERTISEMENT

ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರಯಾಣಿಕರನ್ನು ಆಯಾ ರಾಜ್ಯ ಸರ್ಕಾರದ ಕ್ವಾರಂಟೈನ್ ಕೇಂದ್ರಗಳಲ್ಲಿರಿಸಲಾಗುವುದು.
ಗರ್ಭಿಣಿಯರು, ತುರ್ತು ಚಿಕಿತ್ಸೆ ಬೇಕಾದವರು ,ಆಪ್ತ ಸಂಬಂಧಿಕರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಬಂದವರು, ಹಿರಿಯ ನಾಗರಿಕರು,10 ವರ್ಷದಿಂದ ಕೆಳಗಿನ ಮಕ್ಕಳಿಗೆ ಮನೆಗೆ ಹೋಗಲು ಅನುಮತಿ ನೀಡಿದ್ದು, 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.