ಪೋಖರಣ್ (ರಾಜಸ್ಥಾನ): ಭಾರತೀಯ ವಾಯುಪಡೆಯು ರಾಜಸ್ಥಾನದ ಪೋಖರಣ್ನಲ್ಲಿ ಶನಿವಾರ ತನ್ನ ಎಲ್ಲಾ ಯುದ್ಧವಿಮಾನಗಳು ಮತ್ತು ಕದನ ಹೆಲಿಕಾಪ್ಟರ್ಗಳ ದಾಳಿ ಸಾಮರ್ಥ್ಯದ ಪ್ರಾತ್ಯಕ್ಷಿಕೆ ನಡೆಸಿದೆ.
ಪೂರ್ವನಿಯೋಜಿತವಾಗಿದ್ದ ‘ವಾಯುಶಕ್ತಿ 2019’ ಕಾರ್ಯಕ್ರಮದ ಅಂಗವಾಗಿ ಈ ಪ್ರಾತ್ಯಕ್ಷಿಕೆ ನಡೆದಿದೆ. ಆದರೆ ಪಾಕಿಸ್ತಾನದ ಗಡಿಯ ಬಳಿಯಲ್ಲಿ ಶಕ್ತಿ ಪ್ರದರ್ಶನ ನಡೆದಿರುವುದರಿಂದ ಇದು ಮಹತ್ವ ಪಡೆದುಕೊಂಡಿದೆ.
ಎಲ್ಲಾ ಯುದ್ಧವಿಮಾನಗಳು ಮತ್ತು ಕದನ ಹೆಲಿಕಾಪ್ಟರ್ಗಳು ನೆಲದ ಮೇಲಿನ ಗುರಿಗಳ ಮೇಲೆ ಬಾಂಬ್ ದಾಳಿ ನಡೆಸಿದವು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಅಧಿಕಾರಿಗಳು ಈ ಪ್ರಾತ್ಯಕ್ಷಿಕೆಗೆ ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.