ನವದೆಹಲಿ: ಸಾಮಾಜಿಕ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ್ ಅವರ 200ನೇ ಜನ್ಮದಿನದ ಪ್ರಯುಕ್ತ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ವಿದ್ಯಾಸಾಗರ್ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಪಶ್ಚಿಮ ಬಂಗಾಳದ ವಿದ್ಯಾಸಾಗರ್ ಅವರು 1820ರಲ್ಲಿ ಜನಿಸಿದರು.
‘ಮಹಾನ್ ಸಾಮಾಜಿಕ ಸುಧಾರಕ ಮತ್ತು ಶಿಕ್ಷಣ ತಜ್ಞರಾದ ಈಶ್ವರ ಚಂದ್ರ ವಿದ್ಯಾಸಾಗರ್ ಅವರಿಗೆ ವಿನಮ್ರ ನಮನ. ಬಹುಮುಖಿ ಪ್ರತಿಭೆಯಾದ ಅವರು ಬಾಲ್ಯ ವಿವಾಹದ ವಿರುದ್ಧ ಮತ್ತು ವಿಧವಾ ಪುನರ್ ವಿವಾಹಕ್ಕಾಗಿ ನಡೆಸಿದ ಹೋರಾಟ, ಕ್ರಮಗಳಿಂದ ಮೆಚ್ಚುಗೆಗಳಿಸಿದ್ದಾರೆ’ ಎಂದು ಉಪಾರಾಷ್ಟ್ರಪತಿ ಸಚಿವಾಲಯವು ನಾಯ್ಡು ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.