ADVERTISEMENT

ತಾಜ್‌ ಮಹಲ್‌ ಗುಮ್ಮಟ ಸೋರಿಕೆ, ಮುಳುಗಿದ ಉದ್ಯಾನ

ಪಿಟಿಐ
Published 14 ಸೆಪ್ಟೆಂಬರ್ 2024, 15:52 IST
Last Updated 14 ಸೆಪ್ಟೆಂಬರ್ 2024, 15:52 IST
ಮಳೆ ನಡುವೆಯೂ ಆಗ್ರಾದ ತಾಜಮಹಲಿಗೆ ಬುಧವಾರ ಭೇಟಿ ನೀಡಿದ ಪ್ರವಾಸಿಗರು
ಮಳೆ ನಡುವೆಯೂ ಆಗ್ರಾದ ತಾಜಮಹಲಿಗೆ ಬುಧವಾರ ಭೇಟಿ ನೀಡಿದ ಪ್ರವಾಸಿಗರು   

ಆಗ್ರಾ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ತಾಜ್‌ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರಿನ ಸೋರಿಕೆ ಆಗುತ್ತಿದೆ. ಮಳೆಯಿಂದ ಮಹಲ್‌ನ ಆವರಣದಲ್ಲಿರುವ ಉದ್ಯಾನ ನೀರಿನಲ್ಲಿ ಮುಳುಗಿದೆ.

ತಾಜ್ ಮಹಲ್‌ ಆವರಣದ ಉದ್ಯಾನವು ಜಲಾವೃತವಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಸಾಕಷ್ಟು ಹಂಚಿಕೆಯಾಗಿದ್ದು, ಪ್ರಯಾಣಿಕರ ಗಮನಸೆಳೆಯುತ್ತಿದೆ. ಈ ಬಗ್ಗೆ ವಿವರಣೆ ನೀಡಿರುವ ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಇದೊಂದು ಸ್ವಾಭಾವಿಕ ನೀರು ಜಿನುಗುವಿಕೆ. ಇದರಿಂದ ಯಾವುದೇ ಹಾನಿ ಇಲ್ಲ ಎಂದು ತಿಳಿಸಿದ್ದಾರೆ.

ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮುಖ್ಯ ಅಧೀಕ್ಷಕ ರಾಜ್‌ಕುಮಾರ್‌ ಪಟೇಲ್‌ ಅವರು, ‘ತಾಜ್ ಮಹಲ್‌ನ ಮುಖ್ಯ ಗೋಪುದಲ್ಲಿ ಸೋರಿಕೆ ಆಗುತ್ತಿರುವುದನ್ನು ಗಮನಿಸಿದ್ದೇವೆ. ನಾವು ಪರಿಶೀಲಿಸಿದಾಗ ಇದು ಸ್ವಾಭಾವಿಕ ಎಂದು ತಿಳಿದುಬಂದಿದ್ದು, ಗೋಪುರಕ್ಕೆ ಯಾವುದೇ ಹಾನಿಯಾಗಿಲ್ಲ. ಮುಖ್ಯ ಗುಮ್ಮಟವನ್ನು ಡ್ರೋನ್‌ ಕ್ಯಾಮೆರಾ ಮೂಲಕ ಪರಿಶೀಲಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ADVERTISEMENT

ಉದ್ಯಾನ ಜಲಾವೃತವಾಗಿರುವ 20 ಸೆಕೆಂಡುಗಳ ವಿಡಿಯೊ ಗುರುವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹಂಚಿಕೆಯಾಗಿದ್ದು, ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಸಹ ಅದರ ವಿಡಿಯೊ ಚಿತ್ರೀಕರಿಸಿಕೊಂಡಿದ್ದಾರೆ.

ಸತತ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಸ್ಥಳೀಯರು ಪ್ರವಾಹದ ಪರಿಣಾಮ ಎದುರಿಸು ವಂತಾಗಿದೆ. ಆಗ್ರಾ ಸರ್ಕಾರಿ ಆಡಳಿತವು ಎಲ್ಲ ಶಾಲೆಗಳಿಗೆ ರಜೆ ನೀಡಲು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.