ನವದೆಹಲಿ: ಇನ್ಫೊಸಿಸ್ ಸಂಸ್ಥೆಯು ಭಾರತದ ಆರ್ಥಿಕತೆಯನ್ನು ಅಸ್ತ್ಯವ್ಯಸ್ತಗೊಳಿಸಲು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದೆ ಎಂಬ ಆರ್ಎಸ್ಎಸ್ ಜೊತೆ ಗುರುತಿಸಿಕೊಂಡಿರುವ ಸಾಪ್ತಾಹಿಕ ‘ಪಾಂಚಚನ್ಯ’ದಲ್ಲಿ ಲೇಖನ ಕುರಿತು ಪ್ರತಿಕ್ರಿಯಿಸಲು ಆರ್ಎಸ್ಎಸ್ ನಿರಾಕರಿಸಿದೆ. ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದೆ.
ಆರ್ಎಸ್ಎಸ್ ವಕ್ತಾರ ಸುನಿಲ್ ಅಂಬೆಕರ್ ಅವರು, ಜಿಎಸ್ಟಿ ಮತ್ತು ಐ.ಟಿ. ಕುರಿತು ಇನ್ಫೊಸಿಸ್ ರೂಪಿಸಿರುವ ಪೋರ್ಟಲ್ ಕುರಿತು ವಿವಾದವಿದ್ದು, ಅದನ್ನೇ ಪಾಂಚಜನ್ಯ ಲೇಖನದಲ್ಲಿ ಬಿಂಬಿತವಾಗಿದೆ. ಇದು, ವ್ಯಕ್ತಿಗತ ಹೇಳಿಕೆ. ಸಂಘಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ.. ಇನ್ಫೊಸಿಸ್ನಿಂದಾಗಿ ಸರ್ಕಾರದ ವಿಶ್ವಾಸಕ್ಕೆ ಧಕ್ಕೆ: ಆರ್ಎಸ್ಎಸ್ ಮುಖವಾಣಿ ಕಿಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.