(ಸಂಗ್ರಹ ಚಿತ್ರ)
ಅಹಮದಾಬಾದ್: ‘ಗುಜರಾತ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿರಾಶೆಗೊಂಡಂತೆ, ಉತ್ಸಾಹ ಕಳೆದುಕೊಂಡಂತೆ ತೋರುತ್ತಿದೆ. ಆದರೂ ರಾಜ್ಯದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಸೋಲಿಸಲು ಸಾಧ್ಯವಿರುವುದು ಕಾಂಗ್ರೆಸ್ಗೆ ಮಾತ್ರ. ನಾವು ಖಂಡಿತವಾಗಿಯೂ ನಮ್ಮ ಸಂಕಲ್ಪ ಪೂರೈಸುತ್ತೇವೆ’ ಎಂದು ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಗುಜರಾತ್ನ ಅರವಲ್ಲಿ ಜಿಲ್ಲೆಯ ಮೊಡಾಸಾ ನಗರದಲ್ಲಿ ವಿವಿಧ ಯೋಜನೆಗಳಿಗೆ ರಾಹುಲ್ ಚಾಲನೆ ನೀಡಿದರು.
ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ‘ಕಾಂಗ್ರೆಸ್ ಪಕ್ಷಕ್ಕೆ ಗುಜರಾತ್ ಬಹುಮುಖ್ಯವಾದ ರಾಜ್ಯ. ನಮ್ಮ ಉತ್ಸಾಹ ಕಡಿಮೆಯಾದಂತೆ ತೋರುತ್ತಿದೆ. ಆದರೆ, ಆರೆಸ್ಸೆಸ್ ಮತ್ತು ಬಿಜೆಪಿಯನ್ನು ನಾವು ಖಂಡಿತ ಸೋಲಿಸುತ್ತೇವೆ. ಇದು ಸಾಧ್ಯವಿರುವುದು ಕಾಂಗ್ರೆಸ್ಗೆ ಮಾತ್ರ, ಈ ಕಾರ್ಯ ಕಷ್ಟಸಾಧ್ಯವೇನೂ ಅಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.