ರೈಲು ಪ್ರಯಾಣದಲ್ಲಿ ವ್ಯತ್ಯಯ
ಜಲ್ಪೈಗುರಿ (ಪಶ್ಚಿಮ ಬಂಗಾಳ) (ಪಿಟಿಐ): ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ‘ಆಲ್ ಕಾಮ್ತಾಪುರ ಸ್ಟುಡೆಂಟ್ಸ್ ಯೂನಿಯನ್’ (ಎಕೆಎಸ್ಯು) ಕಾರ್ಯಕರ್ತರು ಶುಕ್ರವಾರ ಜಲ್ಪೈಗುರಿ ಜಿಲ್ಲೆಯಲ್ಲಿ ರೈಲು ತಡೆ ನಡೆಸಿ ಪ್ರತಿಭಟಿಸಿದರು. ಪರಿಣಾಮವಾಗಿ ರೈಲ್ವೆ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.
ನಾರ್ಥ್ ಫ್ರಂಟಿಯರ್ ರೈಲ್ವೆ (ಎನ್ಎಫ್ಆರ್) ವಿಭಾಗದ ನ್ಯೂ ಜಲ್ಪೈಗುರಿ–ನ್ಯೂ ಬೋಂಗೈಗಾಂವ್ನ ಬೆಟ್ಗಾರ ನಿಲ್ದಾಣದಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾದ ಪ್ರತಿಭಟನೆ ಮೂರು ತಾಸುಗಳ ಕಾಲ ನಡೆಯಿತು. ನಂತರ ಆರ್ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿ, ಹೋರಾಟಗಾರ ಮನವೊಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು ಎಂದು ಎನ್ಎಫ್ಆರ್ನ ವಕ್ತಾರ ತಿಳಿಸಿದ್ದಾರೆ.
ಪ್ರತಿಭಟನೆಯ ಪರಿಣಾಮವಾಗಿ ನ್ಯೂ ಜಲ್ಪೈಗುರಿ–ಗುವಾಹಟಿ ವಂದೇ ಭಾರತ್ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.