ADVERTISEMENT

ಯಾವಾಗಲೂ ನಂದಿಗ್ರಾಮದ ಜನತೆಯೊಂದಿಗೆ ಇರುವೆ: ಶಾಸಕ ಸುವೇಂದು

ಪಿಟಿಐ
Published 30 ನವೆಂಬರ್ 2020, 11:40 IST
Last Updated 30 ನವೆಂಬರ್ 2020, 11:40 IST
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ   

ಕೋಲ್ಕತ್ತ: ‘ನಾನು ಯಾವಾಗಲೂ ನನ್ನ ಕ್ಷೇತ್ರ ನಂದಿಗ್ರಾಮದ ಜನತೆಯೊಂದಿಗೇ ಇರುತ್ತೇನೆ’ ಎಂದು ಟಿಎಂಸಿ ಶಾಸಕ ಸುವೇಂದು ಅಧಿಕಾರಿ ಸೋಮವಾರ ಹೇಳಿದರು.

ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ರಾಸ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸುವೇಂದು ಅವರು ಭೂ ಸ್ವಾಧೀನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಈ ಹೋರಾಟದ ಫಲವಾಗಿಯೇ ಮಮತಾ ಬ್ಯಾನರ್ಜಿ ಅವರು 2011ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು.

ADVERTISEMENT

ಸಾರಿಗೆ, ನೀರಾವರಿ ಹಾಗೂ ಜಲಮಾರ್ಗ ಸಚಿವರಾಗಿದ್ದ ಸುವೇಂದು, ಟಿಎಂಸಿಯಲ್ಲಿ ಪ್ರಭಾವಿ ನಾಯಕರೂ ಹೌದು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮುನಿಸಿಕೊಂಡಿರುವ ಅವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿಗೆ ಸೇರ್ಪಡೆಯಾಗುವರು ಎಂಬ ವದಂತಿಗಳೂ ಕೇಳಿಬಂದವು. ಆದರೆ, ಈವರೆಗೆ ಸುವೇಂದು ಅವರು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸಿಲ್ಲ. ಇನ್ನೊಂದೆಡೆ ಅವರು ಟಿಎಂಸಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.