ಮುಂಬೈ: ಜಲಾವೃತವಾದ ರಸ್ತೆಯಲ್ಲಿ ತನ್ನ ಗಂಡನ ಜತೆ ಬೈಕ್ನಲ್ಲಿ ಹೋಗುತ್ತಿದ್ದಾಗ ರಸ್ತೆಗುಂಡಿಯಿಂದಾಗಿ ಬೈಕ್ ಆಯ ತಪ್ಪಿದೆ. ಈ ವೇಳೆ ಹಿಂಬದಿ ಸವಾರಳಾಗಿದ್ದ ಮಹಿಳೆ ಸೀಟಿನಿಂದ ಜಾರಿ ಬಿದ್ದಾಗ ಆಕೆಯ ಮೈಮೇಲೆ ಬಸ್ ಹರಿದಿದೆ.ಮುಂಬೈ ಮಳೆಯಲ್ಲಿ ಸಂಭವಿಸಿದ ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಭಾನುವಾರ ಸಂಜೆ ಥಾಣೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಥಾಣೆಯ ಕಲ್ಯಾಣ ನಿವಾಸಿಯಾಗಿರುವ ಮನೀಶಾ ಭೋರ್ ಎಂಬವರು ತಮ್ಮ ಪತಿಯೊಂದಿಗೆ ಮನೆಯತ್ತ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.ಬೈಕ್ನಲ್ಲಿ ಹಿಂಬದಿ ಸವಾರಳಾಗಿದ್ದ ಮನೀಶಾ ಕೊಡೆ ಹಿಡಿದುಕೊಂಡು ಕುಳಿತಿದ್ದರು.
ಕಲ್ಯಾಣ್ನ ಶಿವಾಜಿ ಚೌಕ್ ತಲುಪಿದಾಗ ರಸ್ತೆ ಗುಂಡಿಯಿಂದಾಗಿ ಬೈಕ್ ವಾಲಿಕೊಂಡಿದ್ದು, ಮನೀಶಾ ಬೈಕ್ ಸೀಟಿನಿಂದ ಜಾರಿ ಬಿದ್ದಿದ್ದಾರೆ. ಆ ಹೊತ್ತಿಗೆ ವೇಗವಾಗಿ ಬರುತ್ತಿದ್ದ ಬಸ್ ಮನೀಶಾ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಕಳೆದೆರಡು ದಿನಗಳಿಂದ ಮುಂಬೈನಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲವೂ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯುಂಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.