ಕೊಯಮತ್ತೂರು: ಕರ್ನಾಟಕದಲ್ಲಿರುವ ನಕ್ಸಲರ ಜೊತೆ ಸಂಪರ್ಕ ಹೊಂದಿದ್ದ ಅನುಮಾನದಲ್ಲಿ ಚಿಕ್ಕಮಗಳೂರಿನ ಶ್ರೀಮತಿ ಎಂಬುವರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಖರ ಸುಳಿವು ಆಧರಿಸಿ ಕ್ಯೂ ಬ್ರ್ಯಾಂಚ್ ಪೊಲೀಸರುಅನ್ನೈಕಟ್ಟಿ ಬಸ್ ನಿಲ್ದಾಣದ ಬಳಿ ಕಾದುಕುಳಿತಿದ್ದರು. ಶ್ರೀಮತಿ ಕೊಯಮತ್ತೂರಿಗೆ ಬಸ್ ಹತ್ತಿದ್ದಳು. ಬಸ್ ಹಿಂಬಾಲಿಸಿದ ಪೊಲೀಸರು ಚೆಕ್ಪೋಸ್ಟ್ ಬಳಿ ಶ್ರೀಮತಿ ಹಾಗೂ ಮತ್ತೊಬ್ಬ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ತನಿಖೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.