ADVERTISEMENT

ಕುಸ್ತಿಪಟುಗಳ ವಿಚಾರದಿಂದ ಬಿಜೆಪಿಗೆ ಹಾನಿ: ತರೂರ್‌

ಪಿಟಿಐ
Published 13 ಜೂನ್ 2023, 14:38 IST
Last Updated 13 ಜೂನ್ 2023, 14:38 IST
ಶಶಿ ತರೂರ್
ಶಶಿ ತರೂರ್   

ವಲ್ಲಾಡೋಲಿಡ್ (ಸ್ಪೇನ್‌): ಕುಸ್ತಿಪಟುಗಳ ಪ್ರತಿಭಟನೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಇಲ್ಲಿ ಟೀಕಿಸಿದ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ‘ಇದು ಬಿಜೆಪಿಗೆ ದೊಡ್ಡ ಪ್ರಮಾಣದ ಹಾನಿ ಉಂಟುಮಾಡಲಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಭಟನೆ ವಿಚಾರವಾಗಿ ರಾಷ್ಟ್ರಕ್ಕೆ ಸ್ವೀಕಾರಾರ್ಹವಲ್ಲದ ನಿಲುವು ಪ್ರಕಟಿಸಿದೆ ಎಂದೂ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

'ಭಾರತದ ಜನರು ಇಂತಹ ದುಷ್ಟ ವರ್ತನೆಯನ್ನು ದೀರ್ಘ ಕಾಲ ತಾಳ್ಮೆಯಿಂದ ಸಹಿಸಿಕೊಳ್ಳಲಾರರು’ ಎಂದು  ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.