ADVERTISEMENT

ಮುಸ್ಲಿಂ ಎಂದು ಹೂತಿದ್ದರು, ಹಿಂದೂ ಎಂದು ತಿಳಿದ ಬಳಿಕ ಸುಟ್ಟರು!

ಕೊಲೆ ಮಾಡಿ ಯಮುನಾ ನದಿಗೆ ಎಸೆದಿದ್ದರು

ಪಿಟಿಐ
Published 29 ಜೂನ್ 2019, 19:02 IST
Last Updated 29 ಜೂನ್ 2019, 19:02 IST
   

ಮುಜಾಫರ್‌ನಗರ: ಇಲ್ಲಿನ ಸ್ಮಶಾನಯೊಂದರಲ್ಲಿ ಹೂಳಲಾಗಿದ್ದ ಯುವಕನ ಮೃತದೇಹವನ್ನು ಶುಕ್ರವಾರ ಹೊರತೆಗೆಯಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದರು.

ಯುವಕ ಮುಸ್ಲಿಂ ಧರ್ಮಕ್ಕೆ ಸೇರಿದವನು ಎಂದು ತಪ್ಪಾಗಿ ತಿಳಿದು ಮೃತದೇಹವನ್ನು ಹೂಳಲಾಗಿತ್ತು. ಆದರೆ, ಆತ ಹಿಂದೂ ಎಂದು ಖಚಿತಗೊಂಡ ಬಳಿಕ ಸುಡಲಾಯಿತು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸುರ್ಜಿತ್‌ ಕುಮಾರ್‌ ತಿಳಿಸಿದರು.

ಯುವಕನನ್ನು ಆತನ ಮೂವರು ಸ್ನೇಹಿತರು ಜೂನ್‌ 17 ರಂದು ಕೊಲೆ ಮಾಡಿ, ಯಮುನಾ ನದಿಗೆ ಎಸೆದಿದ್ದರು. ಮರುದಿನ ದೇಹವನ್ನು ಪತ್ತೆ ಮಾಡಲಾಗಿತ್ತು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.