ADVERTISEMENT

ಆನೆ ದಾಳಿ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:35 IST
Last Updated 9 ಜನವರಿ 2014, 19:35 IST

ಆಲೂರು: ಕಾಡಾನೆ ದಾಳಿಗೆ ತಾಲ್ಲೂ­ಕಿ­ನ ಕೆ.ಹೊಸಕೋಟೆ ಹೋಬ­ಳಿಯ ಪುರಬೈರವನಹಳ್ಳಿಯ ಸರೋಜಮ್ಮ (54) ಮೃತಪಟ್ಟ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.

ಸರೋಜಮ್ಮ ಬೆಳಿಗ್ಗೆ ಬಹಿರ್ದೆಸೆ­ಗೆಂದು ಹಿತ್ತಲಿಗೆ ಹೋಗುತ್ತಿದ್ದಾಗ ತೋಟ­ದಲ್ಲಿದ್ದ ಆನೆ ಬೆನ್ನಟ್ಟಿ ಬಂದಿದೆ. ಮನೆಯ ಸಮೀಪ ದ ಮೋರಿ ಬಳಿ ಸರೋಜಮ್ಮ  ಎಡವಿ ಬಿದ್ದಿದ್ದಾರೆ. ಆನೆ ಅಲ್ಲಿಯೇ ಕಾಲಿ­ನಿಂದ ಹೊಸಕಿ ಅವರನ್ನು ಸಾಯಿ­ಸಿದೆ.

ಘಟನೆ ಬೆಳಿಗ್ಗೆ ನಡೆದಿದ್ದರೂ ಮಧ್ಯಾಹ್ನ 2 ಗಂಟೆಯಾದರೂ ಸ್ಥಳಕ್ಕೆ ಅಧಿಕಾರಿಗಳು ಬಾರದಿರುವು­ದಕ್ಕೆ ಆಕ್ರೋ­ಶ­ಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.