ADVERTISEMENT

ಆಸ್ತಿಗಾಗಿ ತಾಯಿ ಹಾಗೂ ತಮ್ಮನಿಂದಲೇ ಯುವಕನ ಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 8:28 IST
Last Updated 5 ಜುಲೈ 2017, 8:28 IST
ಆಸ್ತಿಗಾಗಿ ತಾಯಿ ಹಾಗೂ ತಮ್ಮನಿಂದಲೇ ಯುವಕನ ಹತ್ಯೆ
ಆಸ್ತಿಗಾಗಿ ತಾಯಿ ಹಾಗೂ ತಮ್ಮನಿಂದಲೇ ಯುವಕನ ಹತ್ಯೆ   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಜೂನ್ 29 ರಂದು ನಡೆದಿದ್ದ ಯುವಕನ ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೇವಿಕೊಪ್ಪ ಗ್ರಾಮದ ಈಚನಹಳ್ಳಿ ಕ್ರಾಸ್ ಬಳಿ ಚೆನ್ನಪ್ಪ ಹೊಸಮನಿ (28) ಎಂಬುವರ ಕೊಲೆಯಾಗಿತ್ತು. ತಾಯಿ ಮಲ್ಲವ್ವ ಹೊಸಮನಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹೆತ್ತ ತಾಯಿಯೇ ತನ್ನ ಕಿರಿ ಮಗ ಹಾಗೂ ಇಬ್ಬರು ಸುಪಾರಿ ಹಂತಕರ ಜೊತೆ ಸೇರಿ ಮಗನನ್ನು ಕೊಲೆ ಮಾಡಿದ್ದ ಸಂಗತಿ ತನಿಖೆಯಿಂದ ಹೊರಬಂದಿದೆ.

ADVERTISEMENT

ಕೊಲೆಯಲ್ಲಿ ಭಾಗಿಯಾದ ತಾಯಿ ಮಲ್ಲವ್ವ ಹೊಸಮನಿ (50), ಕಿರಿಯ ಮಗ ಬಸವರಾಜ ಹೊಸಮನಿ (25), ಸುಪಾರಿ ಹಂತಕರಾದ ಗಲಗಿನಕಟ್ಟಿ ಗ್ರಾಮದ ನಾಗಯ್ಯ ಹಿರೇಮಠ (30), ಬೆಂಡಲಗಟ್ಟಿ ಗ್ರಾಮದ ಚನ್ನಬಸಪ್ಪ ಹಿರೇಮಠ (37) ಅವರುಗಳನ್ನು ಬಂಧಿಸಲಾಗಿದೆ.

ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಸುತ್ತಿಗೆ, ಕಬ್ಬಿಣದ ರಾಡು, ಬೈಕ್ ಜಪ್ತಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.