ಹಾಸನ: ಜಿಲ್ಲೆಯ ಹಿರೀಸಾವೆಯಲ್ಲಿ ಇಂಟರ್ ಸಿಟಿ ರೈಲು ನಿಲುಗಡೆಗೆ ಒತ್ತಾಯಿಸಿರುವ ಸ್ಥಳೀಯರು ಹಾಸನದಿಂದ ಹೊರಟಿದ್ದ ರೈಲು ತಡೆದು ಪ್ರತಿಭಟನೆ ನಡೆಸಿದರು.
ಹಳಿ ಮಧ್ಯೆ ಕುಳಿತು ನೂರಾರು ಮಂದಿ ಧರಣಿ ನಡೆಸಿದರು. ನಿಲ್ದಾಣದ 1 ಕಿ.ಮೀ. ದೂರದಲ್ಲಿ 45 ನಿಮಿಷಕ್ಕೂ ಹೆಚ್ಚು ಹೊತ್ತು ರೈಲು ನಿಲ್ಲಿಸಲಾಗಿತ್ತು.
9.30ಕ್ಕೆ ಬೆಂಗಳೂರು ತಲುಪಬೇಕಿದ್ದ ಪ್ರಯಾಣಿಕರು ರೈಲು ನಿಲುಗಡೆಯಿಂದಾಗಿ ಪರದಾಡುವಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.