ಬೆಂಗಳೂರು: ‘ನ್ಯಾಯಾಲಯದಿಂದ ಬರುವ ಯಾವುದೇ ಪ್ರಕರಣವನ್ನು ಸಾಮಾನ್ಯವಾಗಿ ಎಫ್ಐಆರ್ ದಾಖಲಿಸಿಯೇ ತನಿಖೆ ಆರಂಭಿಸುವುದು. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಈ ಪ್ರಕರಣದಲ್ಲಿಯೂ ಇದನ್ನೇ ಮಾಡಬೇಕಾಗುತ್ತದೆ’ ಎಂದು ಲೋಕಾಯುಕ್ತ ಎಡಿಜಿಪಿ ರೂಪಕ್ ಕುಮಾರ್ ದತ್ತ ಗುರುವಾರ ಇಲ್ಲಿ ಸ್ಪಷ್ಟಪಡಿಸಿದರು.
‘ಯಾವುದೇ ಪ್ರಕರಣ ತನಿಖೆಗಾಗಿ ಬಂದಾಗ ತಾಂತ್ರಿಕವಾಗಿ ಮೊಕದ್ದಮೆ ದಾಖಲಿಸಬೇಕಾಗುತ್ತದೆ.
ಪ್ರಕರಣಕ್ಕೊಂದು ಸಂಖ್ಯೆ ಕೂಡ ನೀಡಬೇಕಾಗುತ್ತದೆ. ಆ ನಂತರವೇ ತನಿಖೆ ನಡೆಯುವುದು. ಇದು ಸಹಜವಾಗಿ ನಡೆಯುವ ಪ್ರಕ್ರಿಯೆ’ ಎಂದು ದತ್ತ ಹೇಳಿದರು. ಈ ನಡುವೆ ವಿಶೇಷ ನ್ಯಾಯಾಲಯದ ಆದೇಶದ ಪ್ರತಿ ಲೋಕಾಯುಕ್ತ ಪೊಲೀಸರಿಗೆ ಗುರುವಾರ ಸಂಜೆಯೇ ಲಭ್ಯವಾಗಿದ್ದು, ಒಂದೆರಡು ದಿನಗಳಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.