
ಪ್ರಜಾವಾಣಿ ವಾರ್ತೆಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೆ.ಬಿ.ದೇವರಾಜ್ ಸೇರಿದಂತೆ ಐದು ಜನ ಮುಖ್ಯ ಎಂಜಿನಿಯರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಸದಾಶಿವರೆಡ್ಡಿ ಬಿ.ಪಾಟೀಲ- ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ಬೆಂಗಳೂರು. ಕೆ.ಬಿ.ದೇವರಾಜ್- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಿರ್ಮಾಣ ನಿಗಮ, ಬೆಂಗಳೂರು. ಸಿ.ಮೃತ್ಯುಂಜಯಸ್ವಾಮಿ- ಯೋಜನಾಧಿಕಾರಿ, ರಾಜ್ಯ ಹೆದ್ದಾರಿ ಯೋಜನೆ ಅನುಷ್ಠಾನ ಘಟಕ (ಎಸ್ಎಸ್ಡಿಪಿ), ಬೆಂಗಳೂರು.
ಎ.ಎನ್.ತ್ಯಾಗರಾಜ್- ಮುಖ್ಯ ಎಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ ವಲಯ), ಬೆಂಗಳೂರು. ಟಿ.ಬಿಸ್ಸೇಗೌಡ- ಮುಖ್ಯ ಎಂಜಿನಿಯರ್, ಕರ್ನಾಟಕ ಪೋಲಿಸ್ ವಸತಿ ನಿಗಮ, ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.