ADVERTISEMENT

ಕಲ್ಲಡ್ಕ ಗಲಭೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ಕಾಂಗ್ರೆಸ್ ಸಾಮರಸ್ಯ ಸಮಾ­ವೇಶದ ವೇಳೆ ಉಂಟಾದ ಗುಂಪು ಘರ್ಷಣೆ ಮತ್ತು ಕಲ್ಲು ತೂರಾಟಕ್ಕೆ ಸಂಬಂಧಿ­ಸಿ­ದಂತೆ ಮೂವರು ಆರೋಪಿ­ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇವರನ್ನು ಭಾನುವಾರ  ಹಿರಿಯ ಸಿವಿಲ್ ನ್ಯಾಯಾಧೀಶರ ಮನೆಗೆ ಹಾಜರು­ಪಡಿಸಲಾಯಿತು. ಬಂಧಿತರನ್ನು ಕಲ್ಲಡ್ಕ ಸಮೀಪದ ಅಮ್ಟೂರು
ನಿವಾಸಿ ಪೂವಪ್ಪ ಟೈಲರ್, ನೆಟ್ಲ ನಿವಾಸಿಗಳಾದ ಗುರುವಪ್ಪ ಮತ್ತು ಕೇಶವ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ನಗರ ಠಾಣಾಧಿಕಾರಿ ಕೊಲೆಗೆ ಯತ್ನಿ­­ಸಿ­ದ್ದಾರೆ ಎಂದು ಆರೋಪಿಸಿ ಪ್ರಕ­ರಣ ದಾಖ­ಲಿಸ­ಲಾಗಿದೆ.

ಬಂಧಿತರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸ­ಲಾಗಿದೆ.

ನಗರ ಠಾಣಾಧಿಕಾರಿ ಸಂಜಯ ಕುಮಾರ್ ಕಲ್ಲೂರ ಮಾತ್ರವಲ್ಲದೆ ಗಾಯಾಳು ಪೊಲೀಸ್ ಸಿಬ್ಬಂದಿ ಮುರು­ಗೇಶ, ಲೋಕೇಶ ಮತ್ತು ರಮೇಶ
ಮಂಗ­ಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿ­ಕೊಂಡಿದ್ದಾರೆ.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಆದರೂ, 144 ಸೆಕ್ಷನ್‌ನಡಿ ಶನಿವಾರ ಜಾರಿಗೊಳಿಸಿದ್ದ ಮೂರು ದಿನಗಳ ನಿಷೇಧಾಜ್ಞೆ ಜಾರಿಯಲ್ಲಿ
ಇರು­­­­ತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.