ADVERTISEMENT

ಕೂಡ್ಲಿಗಿ ಶಾಸಕ ನಾಗೇಂದ್ರ ಮನೆ ಮೇಲೆ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 7:05 IST
Last Updated 3 ಅಕ್ಟೋಬರ್ 2011, 7:05 IST

ಬಳ್ಳಾರಿ (ಪಿಟಿಐ): ರೆಡ್ಡಿ ಅನುಯಾಯಿ ಎಂದೇ ಬಿಂಬಿತವಾಗಿರುವ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಅವರ ಮನೆ ಸೇರಿದಂತೆ ಬಂಧಿತರಾಗಿರುವ ಜನರ್ದನ ರೆಡ್ಡಿಗೆ ಸೇರಿದ ಕೆಲವು ಕಡೆ ಸಿಬಿಐ ದಾಳಿ ನಡೆಸಿದೆ.

ಜಿ.ಜನಾರ್ಧನ ರೆಡ್ಡಿ ಅವರ ಪತ್ನಿ ಒಡೆತನದ ಒಂದು ಕಂಪೆನಿ ಸೇರಿದಂತೆ ಒಟ್ಟು ಎರಡು ಕಂಪೆನಿಗಳ ಮೇಲೂ ಧಾಳಿ ನಡೆದಿದೆ. ಕರ್ನಾಟಕ ವೃತ್ತದ ಸಿಬಿಐ ವರಿಷ್ಠಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರ ನೇತೃತ್ವದಲ್ಲಿ 25 ಅಧಿಕಾರಗಳ ತಂಡವು ಅರುಣಾ ಲಕ್ಷ್ಮಿ ಒಡೆತನದ ಎಎಂಸಿ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಮಾರ್ಚ್ 2010ರಲ್ಲಿ ಎಎಂಸಿ ಯಿಂದ 51 ಲಕ್ಷ ಟನ್ ಉಕ್ಕು ಪಡೆದ ಹಿನ್ನಲೆಯಲ್ಲಿ ಜಿಂದಾಲ್ ಸ್ಟೀಲ್ ವರ್ಕ್ಸ್ ನ ಮಾನವ ಸಂಪನ್ಮೂಲ ಕಚೇರಿಯನ್ನು ಸಿಬಿಐ ಶೋಧಿಸಿತು ಎಂದು ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.