ಹೊಸದುರ್ಗ: ತಾಲ್ಲೂಕಿನ ಕೈನೋಡು ಕಾವಲಿನ ಎಸ್.ನೇರಲಕೆರೆ ಸಮೀಪ ಕರಡಿಯೊಂದು ಮೃತಪಟ್ಟಿರುವುದು ಸೋಮವಾರ ಬೆಳಕಿಗೆ ಬಂದಿದೆ.
ಎಸ್.ನೇರಲಕೆರೆ ಗ್ರಾಮಸ್ಥರೊಬ್ಬರು ಬೆಳಿಗ್ಗೆ ಕೃಷಿ ಕೆಲಸಕ್ಕೆ ತೋಟಕ್ಕೆ ಹೋಗುವಾಗ ಕರಡಿ ಶವ ನೋಡಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ತಾಲ್ಲೂಕು ವಲಯ ಅರಣ್ಯ ಅಧಿಕಾರಿ ಡಿ.ಭರತ್, ಸಿಬ್ಬಂದಿಯೊಡನೆ ಸ್ಥಳ ಧಾವಿಸಿದರು.
ಕರಡಿಯ ದೇಹವನ್ನು ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕರಡಿ ಶರೀರದಲ್ಲಿ ಗಾಯಗಳಾಗಿರಲಿಲ್ಲ. ಸುಮಾರು 12 ವರ್ಷ ವಯಸ್ಸು ಆಗಿದ್ದು, ಇದು ಸಹಜ ಸಾವು ಎಂದು ಪಶು ವೈದ್ಯರು ವರದಿ ನೀಡಿರುವುದಾಗಿ ಅರಣ್ಯ ಅಧಿಕಾರಿ ಡಿ.ಭರತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.